ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ.ಸಿಎಂ ಬಸವರಾಜ ಬೊಮ್ಮಾಯಿ (BASAVARAJ BOMMAI ) ಸಿಟಿ ರೌಂಡ್ಸ್ ಮಾಡುವ ಮೂಲಕ ಮಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.
![](https://rajnewskannada.in/wp-content/uploads/2022/05/siddu-2.png)
ಇದೀಗ ಸಿಎಂ ರೌಂಡ್ಸ್ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( SIDDARAMAIH ) ಕೂಡಾ ಅಖಾಡಕ್ಕೆ ಇಳಿದಿದ್ದು, ನಗರದ ಬ್ಯಾಟರಾಯನಪುರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಥಣಿಸಂದ್ರ ವಾರ್ಡ್ ನ ಫಾತಿಮಾ ಲೇಔಟ್ ಗೆ ಭೇಟಿ ನೀಡಿ ಸ್ಲಂ ಪ್ರದೇಶಗಳಲ್ಲಿ ಪರೀಶಿಲನೆ ನಡೆಸಿದ್ರು. ಇದನ್ನೂ ಓದಿ : – ಜ್ಞಾನವಾಪಿ ಮಸೀದಿಯೊಳಗೆ ಇದೆಯಂತೆ ಶೇಷನಾಗನ ಶಿಲ್ಪಕಲೆ
![](https://rajnewskannada.in/wp-content/uploads/2022/05/SIDDU.png)
ಹೆಬ್ಬಾಳ ರಾಜಕಾಲುವೆ ತುಂಬಿಹರಿದ ಪರಿಣಾಮ ಫಾತಿಮಾ ಲೇಔಟ್ ಮನೆಗಳಿಗೆ ನೀರು ನುಗ್ಗಿತ್ತು. ಶಿವಾಜಿನಗರ ಬ್ರಾಡ್ ವೇ ರೋಡ್ ಗೆ ಭೇಟಿ ನೀಡಿ ಹಫೀಜಾ ಸ್ಕೂಲ್ ಕಾಂಪೌಂಡ್ ಡ್ಯಾಮೇಜ್ ಆಗಿರೋದನ್ನ ಪರಿಶೀಲನೆ ನಡೆಸಿದ್ರು. ಕಾಮರಾಜರಸ್ತೆಯ ಗುಂಡಿ ಬಿದ್ದ ಜಾಗಗಳು, ಅಲಸೂರು ಗುಪ್ತ ಲೇಔಟ್ , ನಂತರ ಗಾಂಧಿನಗರ ಕ್ಷೇತ್ರದ ಸಿರೂರು ಪಾರ್ಕ್ ಗೆ ಭೇಟಿ ನೀಡಿದ್ರು. ಇದನ್ನೂ ಓದಿ : – ಸಿಎಂ ಬೊಮ್ಮಾಯಿ ನಗರ ಪ್ರದಕ್ಷಿಣೆಗೆ ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ