ಒಬ್ಬ ಹೆಣ್ಣುಮಗಳನ್ನ ಹಿಡಿಯಲು ಇಷ್ಟು ದಿನ ಬೇಕಾ ? – ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ದೊಡ್ಡ ಹಗರಣ. ಸರ್ಕಾರದಲ್ಲಿ ಇದೊಂದೇ ಹಗರಣ ಅಲ್ಲ. ಉಪನ್ಯಾಸಕರ ನೇಮಕಾತಿಯಲ್ಲೂ ಹಗರಣಗಳಾಗಿವೆ.ಅಂತವರನ್ನ ಬಂಧಿಸಲಾಗಿದೆ. ಬಿಜೆಪಿ ಸರ್ಕಾರ- ಇದು ಹಗರಣಗಳ ಸರ್ಕಾರ. ಭ್ರಷ್ಟಾಚಾರದಿಂದ ಕೂಡಿದ ಸರ್ಕಾರ ಎಂದು ಕಿಡಿಕಾರಿದ್ದಾರೆ.

After Devgn, Siddaramaiah, HD K insist Hindi not national language


ಈ ಸರ್ಕಾರದಲ್ಲಿ ನಡೆದಂತಹ ಭ್ರಷ್ಟಾಚಾರ ಮತ್ತು ಹಗರಣ ಬೇರೆ ಯಾವಾಗಲೂ ನಡೆದಿಲ್ಲ. ಎಲ್ಲ ಇಲಾಖೆಗಳಲ್ಲೂ ಹಗರಣಗಳು ನಡೆಯುತ್ತಿವೆ. ಪಿಎಸ್ ಐ ನೇಮಕಾತಿಯಲ್ಲಿ ಇಷ್ಟೊಂದು ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಪ್ರಶ್ನೆ ಪತ್ರಿಕೆ ಕೊಟ್ಟಿರುವಂತಹದ್ದು, ತಿದ್ದಿರುವಂತಹದ್ದು..ಯಾವ ಕಾಲದಲ್ಲಿ ನಡೆದಿತ್ತು ಹೇಳಿ. ನಮ್ಮ ಸಕಾ೯ರದಲ್ಲೂ ನೇಮಕಾತಿ ಮಾಡಿದ್ವಿ ಆದ್ರೆ ಯಾವ ಕಾಲದಲ್ಲೂ ಈ ರೀತಿ ಆಗಿರಲಿಲ್ಲ ಎಂದರು.

Congress don't oppose to teaching Bhagavad Gita in schools: Siddaramaiah -  Oneindia News


ಸಕಾ೯ರವೇ ಭ್ರಷ್ಟ ಆಗಿರೋದ್ರಿಂದ ಇಷ್ಟೆಲ್ಲಾ ಆಗಿದೆ. ಇವರೇ ಪ್ರೋಟೆಕ್ಷನ್ ಕೊಡೋವಾಗ ಯಾವಾಗ ಹಿಡಿತಾರೆ. ಒಬ್ಬ ಹೆಣ್ಣು ಮಗಳು ದಿವ್ಯಾ ಹಾಗರಗಿ ಇದಲ್ಲದೆ, ಹಿಂದೆಯೂ ಇಂತಹ ಹಗರಣ ಮಾಡಿರಬಹುದು. ಆ ಹೆಣ್ಣು ಮಗಳನ್ನ ಹಿಡಿಯೋಕೆ 20 ದಿನ ಬೇಕೆಂದ್ರೆ ವೈಫಲ್ಯ ಅಲ್ವಾ ಇದು..ಆಕೆಯನ್ನ ತಕ್ಷಣ ಹಿಡಿಯಬೇಕಿತ್ತು. ಇದರ ಹಿಂದೆ ಪೋಲಿಸನವರು ಮತ್ತು ಸಕಾ೯ರದ ಪ್ರೊಟೆಕ್ಷನ್ ಇದೆ ಎಂದು ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :- ಪಿಎಸ್ ಐ ಪರೀಕ್ಷೆ ಅಕ್ರಮ ಪ್ರಕರಣ – ಪತ್ರದ ಮೂಲಕ ಸಿಐಡಿ ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!