ಪಾಗಲ್ ಪ್ರೇಮಿಯೊಬ್ಬ ಮಾಡಿರುವ ಹುಚ್ಚಾಟ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಬೆಂಗಳೂರಿನ ಶಾಲೆಯೊಂದರ ಮೆಟ್ಟಿಲು,ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ Sorry, Sorry ಎಂದು ಬರೆಯಲಾಗಿದೆ.
![](https://rajnewskannada.in/wp-content/uploads/2022/05/ಸಾರಿ-1.png)
ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ತಡರಾತ್ರಿಯಲ್ಲಿ ಹುಚ್ಚಾಟ ಮೆರೆಯಲಾಗಿದ್ದು, ಸ್ಕೂಲ್ ನ ಕಾಂಪೌಂಡ್, ರಸ್ತೆ, ಸಮೀಪದ ರಸ್ತೆಗಳು, ಮನೆಯ ಕಾಪೌಂಡ್ ಗಳು ಹೀಗೆ ಎಲ್ಲಾ ಕಡೆ Sorry, Sorry ಎಂದು ಬರೆಯಲಾಗಿದೆ. ಇಂದು ಬೆಳಗ್ಗೆ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿಯ ನಿವಾಸಿಗಳು ಬೆಳಗ್ಗೆ ಎದ್ದು ನೋಡಿದಾಗ ನಿಜಕ್ಕೂ ಶಾಕ್ ಆಗಿತ್ತು. ಇದನ್ನೂ ಓದಿ :- ಜಿಲ್ಲಾಪಂಚಾಯತ್ ತಾಲ್ಲೂಕ್ ಪಂಚಾಯತ್ ಚುನಾವಣೆಗೂ ಮುಹೂರ್ತ ಫಿಕ್ಸ್ – 12 ವಾರಗಳ ಗಡುವು ನೀಡಿದ ಹೈಕೋರ್ಟ್
![](https://rajnewskannada.in/wp-content/uploads/2022/05/ಸಾರಿ-2.png)
ರಸ್ತೆ ಮಾತ್ರವಲ್ಲದೇ, ಮನೆಗಳ ಕಾಪೌಂಡ್, ಗೋಡೆಗಳ ಮೇಲೆ Sorry ಬರಹ ಬರೆಯಲಾಗಿದೆ. ಆದರೆ ಯಾರು ಮತ್ತು ಯಾಕೆ ಈ ರೀತಿ Sorry ಕೇಳಿರುವುದು ಎಂದು ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇದೀಗ ಈ ಪ್ರಕರಣಕ್ಕೆ ಪೊಲೀಸರ ಪ್ರವೇಶವಾಗಿದ್ದು, ಪೊಲೀಸರು ಕೂಡ Sorry ಬರೆದ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಫೀಲ್ಡ್ ಗಿಳಿದಿದ್ದಾರೆ.
ಇದನ್ನೂ ಓದಿ :- ಜೆಡಿಎಸ್ ನಿಂದ ಶರವಣಗೆ ಟಿಕೆಟ್ – ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ