ಮಾಜಿ ಶಾಸಕ ಸುರೇಶ್ (suresh gowda ) ಗೌಡ ಕಾರ್ಯಕರ್ತನನ್ನು ಹೊಡೆದಿರುವ ಘಟನೆ ತುಮಕೂರು ಜಿಲ್ಲೆಯ ಬಳಗೆರೆ ಗ್ರಾಮದಲ್ಲಿ ನಡೆದಿದೆ . ನಿನ್ನೆ ಸಂಜೆ ಬಳಗೆರೆ ಗ್ರಾಮಕ್ಕೆ ಸುರೇಶ್ ಗೌಡ ಭೇಟಿ ನೀಡಿದ್ರು .
![](https://rajnewskannada.in/wp-content/uploads/2022/05/WhatsApp-Image-2022-05-22-at-3.50.31-PM-1024x768.jpeg)
ಬಳಗೆರೆ ಗ್ರಾಮದಲ್ಲಿ ದೇವರ ಉತ್ಸವದ ಕಾರ್ಯಕ್ರಮವಿತ್ತು. ಜೊತೆಗೆ ಭಕ್ತರಿಗೆ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಊಟದ ಪಂಕ್ತಿಯಲ್ಲಿ ಸುರೇಶ್ ಗೌಡ ಜನರನ್ನು ಮಾತನಾಡಿಸುತ್ತಿದ್ದರು . ಹಿಂದೆ ಬರುತ್ತಿದ್ದ ಕಾರ್ಯಕರ್ತನೊಬ್ಬ ಜೋರು ಧ್ವನಿಯಲ್ಲಿ ಜೈಕಾರ ಕೂಗಿದ್ದಕ್ಕೆ ಸಿಟ್ಟಿಗೆದ್ದ ಸುರೇಶ ಗೌಡ. ಕಾರ್ಯಕರ್ತನ ಹೊಟ್ಟೆ ಮೇಲೆ ಹೊಡೆದು ಜೈಕಾರ ಕೂಗ ಬೇಡ ಎಂದು ಗದರಿದರು . ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಸುರೇಶ್ ಗೌಡ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗಿದೆ . ಇದನ್ನೂ ಓದಿ : – ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ – ಅರವಿಂದ ಬೆಲ್ಲದ್