6ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕ ಮನಸ್ಸೋ ಇಚ್ಛೆ ಹೊಡೆದಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಕೊಪ್ಪ ತಾಲೂಕಿನ ಬಂಡೀಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ .
![](https://rajnewskannada.in/wp-content/uploads/2022/06/Capture-2.png)
ತಲೆನೋವು ಎಂದು ಹೇಳಿದ್ದಕ್ಕೆ ಮೈಮೇಲೆ ಬಾಸುಂಡೆ ಬರುವಂತೆ ವಿದ್ಯಾರ್ಥಿಯ ಮೇಲೆ ಶಿಕ್ಷಕ ಹಲ್ಲೆ ಮಾಡಿದ್ದಾನೆ . ಶಿಕ್ಷಕ ನಾಗರಾಜ್ (Nagesh) ಎಂಬುವರಿಂದ ಶ್ರೇಯಸ್ ಎಂಬ ಬಾಲಕನ ಮೇಲೆ ಹಲ್ಲೆಯಾಗಿದೆ . ತರಗತಿಯಲ್ಲಿ ಸರಿಯಾಗಿ ಬರೆಯಬೇಕು ಎಂದು ಶಿಕ್ಷಕ ಶ್ರೇಯಸ್ (Shreyas) ತಲೆಗೆ ಹೊಡೆದಿದ್ದಾರೆ . ನಂತರ ಬಾಲಕ ತಲೆನೋವು ಎಂದು ಹೇಳಿದ್ದಕ್ಕೆ ಕಾಲಿಗೆ-ಬೆನ್ನಿಗೆ ಶಿಕ್ಷಕರು ಹೊಡೆದಿದ್ದಾರೆ . ಬಾಲಕನ ಬೆನ್ನಿನ ಮೇಲೆ ಬಾಸುಂಡೆಗಳು. ಬಿದ್ದಿವೆ. ಶಿಕ್ಷಕನ ವಿರುದ್ಧ ಸ್ಥಳಿಯರು, ಪೋಷಕರು ಆಕ್ರೋಶವ್ಯಕ್ತಪಡಿಸಿದ್ದಾರೆ . ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸುವಂತೆ ಪೋಷಕರು ಆಗ್ರಹಿಸಿದ್ದಾರೆ . ಇದನ್ನೂ ಓದಿ : – ಬಿಜೆಪಿಯವರ ಬಗ್ಗೆ ಮಾತನಾಡಿ ಕಾಲಹರಣ ಮಾಡೋದು ಬೇಡ – ಡಿಕೆ ಶಿವಕುಮಾರ್