ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದವ್ರು. ಒಬ್ಬ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನ ಪ್ರಧಾನಿ ಮಾಡಿದ್ರು.
![](https://rajnewskannada.in/wp-content/uploads/2022/06/image-172.png)
ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರ ತ್ಯಾಗಕ್ಕೆ ಬಿಜೆಪಿ ಕಪ್ಪು ಮಸಿ ಬಳಿಯುವ ಕೆಲಸ ಮಾಡುತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ED ಸಿಬಿಐ ಮೂಲಕ ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಜೆಪಿ ತೊಂದರೆ ಕೊಡುತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ಆಗಿದೆ ಅಂತ ಆರೋಪಿಸಿದ್ದಾರೆ. ನಮ್ಮ ನಾಯಕರು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದು ಹೇಳಿದ್ರು. ಇದೇ ವೇಳೆ ರಾಜ್ಯಸಭೆ ಚುನಾವಣೆ ಫಲಿತಾಂಶ ವಿಚಾರ ಕುರಿತಂತೆ ಮಾತನಾಡಿ ಪಕ್ಷೇತರ ಶಾಸಕ ಶರತ್ ನಮ್ಮನ್ನ ಬೆಂಬಲಿಸಿದ್ರು. ಶ್ರೀನಿವಾಸ್ ಗೌಡ ಕೂಡ ನಮ್ಮನ್ನ ಬೆಂಬಲಿಸಿದ್ರು. ಇದನ್ನೂ ಓದಿ : – ಅವನೇನು ಕತ್ತೆ ಕಾಯುತ್ತಿದ್ನಾ..? – ಹೆಚ್.ಡಿ.ಕೆ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶಾಸಕ ಶ್ರೀನಿವಾಸ್
![](https://rajnewskannada.in/wp-content/uploads/2022/06/WhatsApp-Image-2022-06-10-at-12.42.47-PM1-1024x768.jpeg)
ಅಸೆಂಬ್ಲಿ ಹೋರಾಟಕ್ಕೂ ಬೆಂಬಲ ನೀಡಿದ್ರು.ನಮಗೆ ಬೆಂಬಲಕೊಟ್ಟವರಿಗೆ ಧನ್ಯವಾದ ಅರ್ಪಿಸ್ತೇನೆ ಎಂದು ಡಿಕೆಶಿ ತಿಳಿಸಿದ್ರು. ಮೊದಲ ಪ್ರಾಶಸ್ತ್ಯದ ಮತ ನಮಗೇ ಬಂದಿದೆ. ನಮ್ಮ ೬೯ ಮತಗಳು ನಮಗೆ ಬಂದಿದ್ದಾವೆ. ಎರಡನೇ ಪ್ರಾಶಸ್ತ್ಯದ ಮತಗಳು ನಮಗೆ ಬಂದಿವೆ. ಯಾವ ಮತಗಳು ಬೇರೆಯವರಿಗೆ ಹೋಗಿಲ್ಲ. ನಾನೇ ಖುದ್ದಾಗಿ ಗಮನಿಸಿದ್ದೇನೆ. ಯಾರ್ಯಾರ ಒತ್ತಡ ಏನಿತ್ತು ನಮಗೆ ಗೊತ್ತಿದೆ. ನಮ್ಮ ಪಕ್ಷದ ಯಾವ ಶಾಸಕರು ಅಡ್ಡಮತದಾನ ಮಾಡಿಲ್ಲ. ನಾನು ಬೇರೆಯವರ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ರು. ನೂಪುರ್ ಶರ್ಮಾ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಬಿಜೆಪಿ ಸರ್ಕಾರದ ಜವಾಬ್ದಾರಿ, ಶಾಂತಿ ಕಾಪಾಡುವುದು. ಕರ್ನಾಟಕದಲ್ಲಿ ನಾನು ಎಲ್ಲರಲ್ಲಿ ಕೈ ಜೋಡಿಸಿ ಮನವಿ ಮಾಡ್ತೇನೆ. ಯಾರು ಪ್ರಚೋದನೆಗೆ ಕಿವಿಗೊಡಬಾರದು. ಶಾಂತಿ ಕಾಪಾಡಬೇಕು ಮನವಿ ಮಾಡಿದ್ರು.
ಇದನ್ನೂ ಓದಿ : – ಒಂದು ವಾರದ ವರೆಗೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ – ಕುಮಾರಸ್ವಾಮಿ