ತಡರಾತ್ರಿ ಆಹಾರ ಹರಸಿ ಬಂದ ಜಿಂಕೆ ಪಾಳು ಬಾವಿಗೆ ಬಿದ್ದು ಪರದಾಟವನ್ನು ಅನುಭವಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ.
![](https://rajnewskannada.in/wp-content/uploads/2022/05/Capture1.png)
ಬಾವಿಯಲ್ಲಿ ಬಿದ್ದು ಪರದಾಡ್ತಿದ್ದ ಜಿಂಕೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಾವಿಯಲ್ಲಿ ಬಿದ್ದಿದ್ದ ಜಿಂಕೆ ಮೇಲಕ್ಕೆತ್ತಿ ಜಿಂಕೆಯ ರಕ್ಷಣೆಯನ್ನು ಮಾಡಿದ್ದಾರೆ. ನಂತರ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ :- ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕಾಫಿನಾಡ ಬಿ.ಎಸ್.ರಾಜು ನೇಮಕ