ED ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರೇ ನೀವು ಸಂವಿಧಾನಕ್ಕಿಂತ ದೊಡ್ಡವರು ಇದ್ಸೀರಾ..? ಸಂವಿಧಾನದ ಮೇಲೆ ಗೌರವ ಇರೋ ನಿಮಗೆ ಭಯ ಯಾಕೆ..?. ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರಿಗಳೇ ಬೆಂಬಲ ಕೊಡ್ತಿದ್ದಾರೆ.
![](https://rajnewskannada.in/wp-content/uploads/2022/06/ban-con.png)
ಆಡು ಮುಟ್ಟದ ಸೊಪ್ಪಿಲ್ಲ, ಭ್ರಷ್ಟಾಚಾರ ಮಾಡದೇ ಕಾಂಗ್ರೆಸ್ ನವ್ರು ಇಲ್ಲ. ಸಾಲು ಸಾಲು ಹಗರಣಗಳ ಸರದಾರರು. ಕಾಲಿನಿಂದ ತಲೆ ಮೇಲೆ ವರೆಗೂ ಭ್ರಷ್ಟಾಚಾರ ಹೊತ್ತವರು ಕಾಂಗ್ರೆಸ್ ನವ್ರು. ಈ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ರೆ ಬೀದಿಗಿಳಿಯುತ್ತಾರೆ. ಹಾಗಲಕಾಯಿಗೆ ಬೇವಿನಮರ ಸಾಕ್ಷಿ ಎಂಬಂತೆ ಈ ಹಗರಣವನ್ನು ಮುಚ್ಚಿ ಹಾಕಲು ಹೊರಟಿದ್ದಾರೆ. ಇವ್ರು ದೇಶಕ್ಕಿಂತ ದೊಡ್ಡವರು ಅಂದಾ ಅಂದ್ಜೊಂಡಿರೋದೇ ದೊಡ್ಡ ದುರಂತ. ರಾಹುಲ್ ಗಾಂಧಿ ಹೇಳಿದಂತೆ, ಆಲೂಗೆಡ್ಡೆ ಯಲ್ಲಿ ಚಿನ್ನ ತೆಗೆಯೋದು ಅಂದರೆ ಅದು ಇದೆ ರೀತಿ ಅನ್ಸುತ್ತೆ. ಇಲ್ಲಿ ಒಬ್ರು ಜೈಲಿಂದ ಬಂದು ಬೇಲ್ ಮೇಲೆ ಹೊರಗೆ ಇದ್ದಾರೆ. ಇದನ್ನೂ ಓದಿ : – ನ್ಯಾಷನಲ್ ಹೆರಾಲ್ಡ್ ಪ್ರಕರಣ- ಭೋಜನ ವಿರಾಮದ ಬಳಿಕ ರಾಹುಲ್ ವಿಚಾರಣೆ
![](https://rajnewskannada.in/wp-content/uploads/2022/06/image-129.png)
ಯಾರಾದರೂ ಕೃಷಿಯಲ್ಲಿ ನೂರಾರು ಕೋಟಿ ಲಾಭ ಇದೆ ಅಂತಾ ತೋರಿಸಿರೋರು ಇದ್ಸಾರಾ..? ಇವ್ರು ಮೇಲ್ನೋಟಕ್ಕೆ ತಪ್ಪು ಮಾಡಿರೋದು ಇದೆ. ತಪ್ಪು ಮಾಡಿರೋರು ಶಿಕ್ಷೆ ಅನುಭವಿಸಬೇಕು, ಉಪ್ಪು ತಿಂದವರು ನೀರು ಕುಡಿಬೇಕು. ಇವ್ರು ತನಿಖೆಯಿಂದ ತಪ್ಪಿಸಿಕೊಳ್ಳಲು ಬೀದಿ ನಾಟಕ ಮಾಡ್ತಿದ್ದಾರೆ. ಇವ್ರು ಒಂದು ಕುಟುಂಬದ ಗುಲಾಮರಾಗಿದ್ಸಾರೆ. ಹೀಗಾಗಿ ಆ ಕುಟುಂಬವನ್ನು ಬಚಾವ್ ಮಾಡಲು ಬೀದಿಗೆ ಇಳಿದಿದ್ದಾರೆ. ಸಿದ್ದರಾಮಯ್ಯನವರೇ ನೀವು ಸಿವಿಲ್ ಮತ್ತೆ ಕ್ರಿಮಿನಲ್ ಲಾಯರ್ ಎಂದು ಗೊತ್ತಿದೆ. ಆದರೆ ನೀವು ಲಾಯರ್ ಪ್ರಾಕ್ಟೀಸ್ ಮಾಡಿದ್ದೀರೋ ಇಲ್ವೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದ್ಯೋ ಇಲ್ವೋ ಹೇಳಿ ಕ್ರಿಮಿನಲ್ ಹಾಗೂ ಸಿವಿಲ್ ಲಾಯರ್ ಸಿದ್ದರಾಮಯ್ಯನವ್ರೇ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗೆ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : – ರಾಹುಲ್, ಸೋನಿಯಾ ಗಾಂಧಿ ಬೆಂಬಲಕ್ಕೆ ನಿಂತ ಕಾಂಗ್ರೆಸ್ – ಪ್ರತಿಭಟನೆ ತಡೆದ ಪೊಲೀಸರು, ಹಲವು ನಾಯಕರು ವಶಕ್ಕೆ