ಸಂಘ ನಿಷೇಧ ಮಾಡಲು ಹೋದವರು ಕೈ ಸುಟ್ಟುಕೊಂಡಿದ್ದಾರೆ – ಸಿದ್ದು ವಿರುದ್ಧ ಕಟೀಲ್ ವಾಗ್ದಾಳಿ

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಹೊರಟ್ಟಿ(Basavaraj horatti) ಪರ ಪ್ರಚಾರಕ್ಕೆ ಬಂದಿದ್ದೇನೆ. ಹುಬ್ಬಳ್ಳಿ ಹಾಗೂ ಧಾರವಾಡ(Hubballi – Dharwad) ಕಾಲೇಜಗಳಲ್ಲಿ ಶಿಕ್ಷಕರನ್ನ ಮಾಡತಾಡಿಸಿದ್ದೆವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್(Nalin kumar kateel) ಹೇಳಿದ್ದಾರೆ .

ಧಾರವಾಡದಲ್ಲಿ ಮಾತನಾಡಿದ ಅವರು ಈ ಬಾರಿ ಪರಿಷತ್ ನ ನಾಲ್ಕು ಸ್ಥಾನಗಳನ್ನು ಗೆದ್ದೇ ಗೆಲ್ತೆವೆ ಎಂದು ಹೇಳಿದ್ದಾರೆ. ಎಲ್ಲಾ ಕಡೆ ಪ್ರವಾಸ ಮಾಡಿದ್ದೇನೆ. ಒಳ್ಳೆಯ ಪ್ರತಿಕ್ರಿಯೆ ಇದೆ . ರಾಜ್ಯಸಭೆಯ ಮೂರು ಸ್ಥಾನಗಳನ್ನು ನಾವು ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ ಎಸ್ ಎಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯ(Siddaramaiah) ಹೇಳಿಕೆ ವಿಚಾರರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರ ಭಕ್ತರನ್ನ ನಿರ್ಮಾಣ ಮಾಡುವ ಸಂಘ .ಅಂತ ಸಂಸ್ಥೆ ರಾಜಕಾರಣದಲ್ಲಿ ಇಲ್ಲಾ, ಸಂಘವನ್ನು ರಾಜಕಾರಣಕ್ಕೆ ತರುವಂತದ್ದು, ಟೀಕೆ ಮಾಡುವುದು ಒಳ್ಳೆಯದಲ್ಲ. ಸಿದ್ದರಾಮಯ್ಯನವರಂತ ಹಿರಿಯರ ಮಾತು ಅವರಿಗೆ ಭೂಷಣ ಅಲ್ಲ .

ಕಾಂಗ್ರೆಸ್ ನಲ್ಲಿ ಇದ್ದವರು ಸಂಘದ ಶಾಖೆಗೆ ಹೋದವರು ಇದ್ದಾರೆ .ಜಾಫರ್ ಶರೀಫ್ ಅಂತವರು ಸಂಘದ ಬಗ್ಗೆ ಉಲ್ಲೇಖ ಮಾಡಿದ್ದಾರೆ . ಉಗ್ರಪ್ಪ ಶಾಖೆಗೆ ಹೋದವರು . ಸಂಘವನ್ನು ನಿಷೇಧ ಮಾಡಲು ಹೋಗಿ ನೆಹರು ಕೂಡ ಕೈ ಸುಟ್ಟು ಕೊಂಡಿದ್ದಾರೆ. ಇಂದಿರಾ ಗಾಂಧಿ ಕೈ ಸುಟ್ಟು ಕೊಂಡಿದ್ದಾರೆ. ಈಗ .ಸಿದ್ದರಾಮಯ್ಯ ಕೈ‌ಹಾಕಿದ್ದಾರೆ, ಕಾಂಗ್ರೆಸ್ ಸುಟ್ಟು ಹೋಗುತ್ತೆ ಎಂದು ಹೇಳಿದ್ರು.ಇದೇ ವೇಳೆ ಹೊರಟ್ಟಿ ಬಿಜೆಪಿ ನಿಲುವಿಗೆ ಬದ್ಧರಾಗಿರುತ್ತಾರೆ ಎಂದು ನಳಿನ್ ಕುಮಾರ ಕಟಿಲ್ ತಿಳಿಸಿದ್ದಾರೆ. ಇದನ್ನೂ ಓದಿ :- ಚಿಕ್ಕಬಳ್ಳಾಪುರ ರಿಪಬ್ಲಿಕ್ ನಲ್ಲಿ ಎಷ್ಟು ಕಮಿಷನ್ ನಡೀತಿದೆ – ಉಗ್ರಪ್ಪ ವಾಗ್ದಾಳಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!