ಇಂದು ಎಲ್ಲೆಡೆ ನರಸಿಂಹ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯದಲ್ಲಿ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ.
![](https://rajnewskannada.in/wp-content/uploads/2022/05/ಗಾಠಿ-1.png)
ಬೆಳಗ್ಗೆಯಿಂದ ಘಾಟಿ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಹಾಗೂ ದೇವಸ್ಥಾನದ ಆವರಣದಲ್ಲಿ ನರಸಿಂಹ ಸ್ವಾಮಿಯ ಚಿಕ್ಕ ರಥೋತ್ಸವ ಎಳೆಯಲಾಗಿದೆ.
![](https://rajnewskannada.in/wp-content/uploads/2022/05/ಗಾಟಿ-3.png)
ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಭಕ್ತರಿಂದ ಸುಬ್ರಮಣ್ಯ ಸಮೇತ ನರಸಿಂಹನ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ : – ವಿಧಾನ ಪರಿಷತ್ತಿನ ಏಳು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿಗೆ ನಾಲ್ಕು ಸ್ಥಾನಗಳು