ಇವತ್ತಿನ ರಾಜಕಾರಣ ನೋಡಿ ಬೇಸರವಾಗಿದೆ. ನಾನು ಜೆಡಿಎಸ್ ಗೆ ಮತಹಾಕದೆ ಹೋದರೆ ಮತದಾರರು ತಪ್ಪು ತಿಳಿದುಕೊಳ್ತಾರೆ. ಹಾಗಾಗಿ ನಾನು ಜೆಡಿಎಸ್ ಗೆ ಮತಹಾಕಿದ್ದೇನೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.
![](https://rajnewskannada.in/wp-content/uploads/2022/06/image-123.png)
ಬೆಂಗಳೂರಿನಲ್ಲಿ ಮಾತನಾಡಿದ ಅವರು ಯಾವ ಸಂಧಾನ ಸಭೆ ನಡೆದಿಲ್ಲ. ನಾನು ಯಾವತ್ತೂ ಕ್ರಾಸ್ ಮಾಡಿಲ್ಲ. ನಾಯಕರ ನಡುವೆ ಭಿನ್ನಾಬಿಪ್ರಾಯ ಇರಬಹುದು. ರಾಜ್ಯದ ಜನರು ಕೂಡ ಬೇಸತ್ತಿದ್ದಾರೆ. ಮುಂದೆ ನಿಲ್ಲಬೇಕಾ ಬೇಡ್ವಾ ಎಂಬ ಗೊಂದಲವಿದೆ. ಜನರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇನೆ. ನಾನು ಯಾವ ಪಕ್ಷಕ್ಕೂ ಭಾದ್ಯನಲ್ಲ. 3 ಪಕ್ಷಗಳಿಂದ ಮತದಾನ ಪೂರ್ಣವಾಗಿದೆ. ಒಟ್ಟು 224 ಶಾಸಕರಿಂದ ಮತ ಚಲಾವಣೆವಾಗಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ ಗೆ ಮತ ನೀಡಿರುವುದಕ್ಕೆ ಶ್ರೀನಿವಾಸ್ ಗೌಡ ವಿರುದ್ದ ಪ್ರತಿಭಟನೆ