ಪ್ರಧಾನಿ ನರೇಂದ್ರ ಮೋದಿ ಅವರ ಹಿಂಸೆ ಹಾಗೂ ಒತ್ತಡದಿಂದಾಗಿ ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಮೃತಪಟ್ಟರು ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ವೇಳೆ ಗುರುವಾರ ಭಾಷಣ ಮಾಡಿದ ಅವರು, ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸುಷ್ಮಾ ಸ್ವರಾಜ್ ಎಂಬುವವರು ಮೋದಿ ಸರಕಾರದಲ್ಲಿದ್ದರು. ಮೋದಿ ಕಾಟ ತಡೆಯದೇ ಅವರು ಅಸುನೀಗಿದ್ದರು. ಮತ್ತೊಬ್ಬ ಸಚಿವ ಅರುಣ್ ಜೇಟ್ಲಿ, ಮೋದಿ ಅವರ ಒತ್ತಡ ತಾಳಲಾರದೇ ಮೃತಪಟ್ಟರು ಎಂದು ಆರೋಪಿಸಿದರು.
ಪಕ್ಷದ ಹಿರಿಯ ಸಚಿವರನ್ನು ಮೋದಿ ಕಡೆಗಣಿಸಿದ್ದು ಮಾತ್ರವಲ್ಲ, ಹಿರಿಯ ನಾಯಕರಾದ ವೆಂಕಯ್ಯ ನಾಯ್ಡು ಅವರನ್ನು ಕೂಡ ಮೂಲೆಗುಂಪು ಮಾಡಿದರು ಎಂದು ಆರೋಪಿಸಿದ ಉದಯನಿಧಿ ಮಾರನ್ ನಾನೇನು ತಮಿಳುನಾಡು ಮುಖ್ಯಮಂತ್ರಿ ಪಿ.ಪಳನಿಸ್ವಾಮಿ ಅಲ್ಲ ನಿಮಗೆ ಹೆದರಲು ಎಂದು ಸವಾಲು ಹಾಕಿದರು.