ಬಿಜೆಪಿಯ MLAಗಳು ಜೈಲಿಗೆ ಏಕೆ ಹೋಗಿದ್ರು- ಕಟೀಲ್ ಗೆ ಡಿಕೆಶಿ ಪ್ರಶ್ನೆ

ತಿಹಾರ್ ಜೈಲಿಗೆ ಪುಸ್ತಕ ಓದಲು ಹೋಗಿದ್ದರಾ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (NALIN KUMAR KATEEL ) ಹೇಳಿಕೆಗೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ( D.K.SHIVAKUMAR )ಅವರು, ಯಡಿಯೂರಪ್ಪ (YEDIYURAPPA ) ಅಮಿತ್ ಶಾ, (AMITH SHAH ) ಬಿಜೆಪಿ ಪಾರ್ಟಿಯ ಎಂಎಲ್ಎಗಳು ಮಾಜಿ ಮಂತ್ರಿಗಳೆಲ್ಲಾ ಏತಕ್ಕೆ ಜೈಲಿಗೆ ಹೋಗಿದ್ದರು.

ಅವರು ಯಾವ ವಚನ ಓದಲು ಹೋಗಿದ್ದರು. ಏನು ಜ್ಞಾನ ಕಲಿಯಲು ಹೋಗಿದ್ದರು. ಅವರ ರೀತಿ ನಾನು ಯಾವುದೇ ಆರೋಪಗಳನ್ನು ಹೊತ್ತುಕೊಂಡು ಹೋಗಿಲ್ಲ. ರಾಜಕೀಯ ಷಡ್ಯಂತ್ರದ ಮೇಲೆ ನಮ್ಮನ್ನು ಕಳುಹಿಸಿಕೊಟ್ಟಿದ್ದರು ಎಂದಿದ್ದಾರೆ.ಪಿಎಸ್ಐ ಹಗರಣದ ಕಿಂಗ್ಪಿನ್ ಇದ್ದಾರೆ ಎಂಬ ಮಾಜಿ ಸಿಎಂ ಎಚ್ಡಿಕೆ ಹೇಳಿಕೆ ವಿಚಾರವಗಿ ಮಾತನಾಡಿದ ಅವರು, ಕುಮಾರಸ್ವಾಮಿ (KUMARSWAMY) ಹೇಳಿರುವುದರಲ್ಲಿ ಸತ್ಯ ಕಾಣುತ್ತಿದೆ. ಇದನ್ನೂ ಓದಿ : – ಮೇ 15ರಿಂದ ಯೋಗ ಕ್ಷಣಗಣನೆಗೆ ಚಾಲನೆ: ವಚನಾನಂದ ಶ್ರೀ

ಪಿಎಸ್ಐ ಹಗರಣದಲ್ಲಿ ಕಿಂಗ್ಪಿನ್ ಇರುವುದು ಸತ್ಯನೇ. ಕಿಂಗ್ಪಿನ್ ಕೆಲವರನ್ನೆಲ್ಲ ಬಿಡಿಸುತ್ತಿದ್ದಾರೆ. ಬರೀ ಆಫೀಸರ್, ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬಂಧಿಸುತ್ತಿದ್ದಾರೆ. ಅಂಗಡಿ ಓಪನ್ ಮಾಡಿದವರಲ್ಲ, ಆ ಅಂಗಡಿಯಲ್ಲಿ ಏನಾದರೂ ಸಾಮಾನು ಖರೀದಿ ಮಾಡಲು ಹೋಗಿರುವ ಹುಡುಗರುಗಳನ್ನು ಬಂಧಿಸುತ್ತಿದ್ದಾರೆ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : – ಕಾಂಗ್ರೆಸ್ ನವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ..ಇನ್ನು ನಾಡನ್ನು ಏನ್ ಕಟ್ತಾರೆ? – ನಳೀನ್ ಕುಮಾರ್ ಕಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!