ಬೆಂಗಳೂರು: ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಕುಸಿತ ಉಂಟಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
108 ಅಡಿ ಉದ್ದದ ಮಲೆ ಮಹದೇಶ್ವರ ಪ್ರತಿಮೆ ನಿರ್ಮಾಣದ ವೇಳೆ ಕೆಳಭಾಗದಲ್ಲಿ ನಿರ್ಮಿಸಿರುವ ಕಲ್ಲಿನ ತಡೆಗೋಡೆ ಕುಸಿದೆ. ಈ ಹಿಂದೆಯೂ ಎರಡು ಬಾರಿ ಕಲ್ಲು ಕುಸಿತವಾಗಿತ್ತು. ಸದ್ಯ ಪ್ರತಿಮೆ ವೀಕ್ಷಣೆಗೆ ಪ್ರಾಧಿಕಾರ ಭಕ್ತರಿಗೆ ಬ್ರೇಕ್ ಹಾಕಿದೆ. ಕಲ್ಲು ಕಟ್ಟಡ ನಿರ್ಮಿಸಲು ಪ್ರಾಧಿಕಾರ ಮತ್ತೆ ಕಾಮಗಾರಿ ಕೈಗೊಂಡಿದೆ.