ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ಕಾಂಗ್ರೆಸ್ (Congress) ಮುಖಂಡರಾದ ಕೃಷ್ಣ ಭೈರೇಗೌಡ (Krishna bairegowda) ಹಾಗೂ ಪ್ರಿಯಾಂಕ್ ಖರ್ಗೆ (Priyankh kharge) ಸುದ್ದಿಗೋಷ್ಠಿ ನಡೆಸಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಡ್ರಗ್ಸ್ ಕ್ಯಾಪಿಟಲ್, ಪಾಟ್ ಹೋಲ್ ಕ್ಯಾಪಿಟಲ್ ಆಗ್ತಿದೆ.
ಬೆಂಗಳೂರು ಐಟಿ ಕ್ಯಾಪಿಟಲ್ ಸ್ಟಾರ್ಟಪ್ ಕ್ಯಾಪಿಟಲ್ ಆಗಿದ್ದ ನಗರ. 2015-16ರಲ್ಲಿ ಮೋಸ್ಟ್ ಡೈನಾಮಿಕ್ ಸಿಟಿ ಆಗಿದ್ದ ಬೆಂಗಳೂರು, ಮುಳುಗುತ್ತಿರುವ ನಗರ ಆಗಿದೆ. ಈಗ ಬೆಂಗಳೂರು ಮಾನ್ಯತೆ ಪ್ರಪಂಚದಲ್ಲಿ ಮುಳುಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಕಿಡಿಕಾರಿದ್ರು. ಬೆಂಗಳೂರಿಗೆ ಅವಶ್ಯಕತೆ ಇರುವ ಆಡಳಿತವೇ ಇಲ್ಲ. ಬೆಂಗಳೂರಿನ ಆಡಳಿತ ವ್ಯವಸ್ಥೆ ಇದೆಯಾ? ಯಾರು ಅಕೌಂಟೆಬಲ್ ಇದಕ್ಕೆ. ಸಿಎಂ ಇಡೀ ರಾಜ್ಯವನ್ನು ನೋಡಬೇಕು, ಯಾರು ಬೆಂಗಳೂರಿಗೆ ಉಸ್ತುವಾರಿ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಮುಳುಗುತ್ತಿರುವ ನಗರ ಆಗಿದೆ. 40% ಕಮಿಷನ್ ನೇರವಾಗಿ ಇದಕ್ಕೆ ಕಾರಣ. 50% ಲಂಚ ತೆಗೆದುಕೊಂಡ ಮೇಲೆ ಯಾವ ಕಾಲುವೆ ಉಳಿಯುತ್ತದೆ? ಯಾವ ರಸ್ತೆ ಉಳಿಯುತ್ತದೆ? ಇಷ್ಟು ದುಡ್ಡು ತಿಂದ ಮೇಲೆ ಉಳಿದ ದುಡ್ಡಲ್ಲಿ ಏನು ಕೆಲಸ ಮಾಡಲಿಕ್ಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪ್ರಪಂಚಕ್ಕೆ ಮುಕುಟ ಆಗಿದ್ದ ಬೆಂಗಳೂರು ಈಗ ಎಲ್ಲ ಅನಾಹುತಗಳಿಗೂ ವಿದ್ಯಮಾನಗಳಿಗೆ ಸಾಕ್ಷಿ ಆಗ್ತಿದೆ. ಒಂದು ಕಡೆ 50% ಭ್ರಷ್ಟಾಚಾರ ಆದ್ರೆ, ಬರುವ ಅನುದಾನವನ್ನೆಲ್ಲ ತೆಗೆದು ಬರೀ ರಸ್ತೆಗೆ ಟಾರ್ ಹಾಕೋದಕ್ಕೆ ಸುರಿಯುತ್ತಾರೆ. ಹಳೆ ಕಲ್ಲೂ ಹೊಸ ಬಿಲ್ಲು ಎಂಬ ಮಾತಿದೆ. ಒಂದೊಂದೆ ಕೆಲಸಕ್ಕೆ ಎರಡೆರಡು ಬಿಲ್ ಮಾಡಿ ಲೂಟಿ ಹೊಡೆಯೋದು ಎಂದು ಪರೋಕ್ಷವಾಗಿ ಮುನಿರತ್ನ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ : – ಹಬ್ಬದ ಮರುದಿನವೇ ಗುಡ್ ನ್ಯೂಸ್ – ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ
ಪ್ರಧಾನಿ ಮೋದಿ (Modi) ಅರ್ಧ ದಿನದ ಕಾರ್ಯಕ್ರಮಕ್ಕೆ 26 ಕೋಟಿ ಖರ್ಚು ಮಾಡ್ತಾರೆ. ಜನರ ಸಮಸ್ಯೆ ಕೇಳಿದರೆ ಬರೀ ಸುಳ್ಳು ಭರವಸೆ ಬಿಟ್ಟರೆ ಬೇರೆನೂ ಇಲ್ಲ. ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿ ಪಡಿಸಲು ನಿಮ್ಮ ಹತ್ರ ದುಡ್ಡಿಲ್ವಾ? ಎಂದು ಕೇಳಿದ್ದಾರೆ.
ಇದನ್ನೂ ಓದಿ : – ಗದಗದಲ್ಲಿ ಧಾರಾಕಾರ ಮಳೆ – ಚನ್ನಪಟ್ಟಣದ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ