ರಾಜ್ಯದಲ್ಲಿ ಇರೋದು 40 ಪರ್ಸೆಂಟ್ ಬಿಜೆಪಿ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಪರ್ಸೆಂಟೇಜ್ ಸರ್ಕಾರ ಒಬ್ಬ ಗುತ್ತಿಗೆದಾರನನ್ನ ಬಲಿ ಪಡೆದಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಹೊಸಕೋಟೆಯ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಿನನಿತ್ಯ ಹೊಸ ಹೊಸ ಹಗರಣಗಳನ್ನ ಬಿಜೆಪಿ ಮಾಡ್ತಿದೆ. ಇವೆಲ್ಲಾ ಹಗರಣಗಳು ದಿನೇ ದಿನೇ ಮಾಧ್ಯಮಗಳಲ್ಲಿ ವರದಿಯಾಗ್ತಿವೆ. ಪಿಎಸ್ಐ ಆಯ್ಕೆ ಅಕ್ರಮ ಹಗರಣ ಈಗಾಗಲೇ ಬಯಲಿಗೆ ಬಂದಿದೆ. ಇದನ್ನು ಓದಿ :- ರಾಮನಗರ ಕ್ಲೀನ್ ಮಾಡ್ತೇನೆ ಅಂತ ಬಂದ್ರು ಇದೇನಾ ಕ್ಲೀನ್ ಎಂದ ಡಿಕೆಶಿ
ಇದೊಂದೆ ಅಲ್ಲ ಪೊಸ್ಟಿಂಗಲ್ಲಿ ಆಗಿರಬಹುದು ಎಲ್ಲಾದಕ್ಕೂ ರೇಟ್ ಚಾರ್ಟ್ ಮಾಡಿದ್ದಾರೆ. ಬೆಂಗಳೂರಲ್ಲಿ ಎಸಿಪಿ, ಡಿಸಿಪಿಗೂ ರೇಟ್ ಚಾರ್ಟ್ ಇದೆ. ಟಿಹೆಚ್ಓ ಡಿಹೆಚ್ಓ ಹಾಕಿಸಿಕೊಳ್ಳೊಕೋ ರೇಟ್ ಪಿಕ್ಸ್ ಮಾಡಿದ್ದಾರೆ. ಈ ರೀತಿ ಮಾಡಿದ್ರೆ ಬಡವರಿಗೆ ಹೇಗೆ ನ್ಯಾಯ ಕೊಡಲಿಕ್ಕೆ ಹಾಗುತ್ತೆ. ಟಿಹಚ್ಓ ಹಣ ಕೊಟ್ಟು ಬಂದು ಬಡವರ ಆರೋಗ್ಯ ಹೇಗೆ ನೋಡ್ತಾರೇ. ಈ ರೀತಿ ಪರ್ಸೆಂಟೆಜ್ ಗಳು ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಹಾಗೇ ಹೊಸಕೋಟೆ ಯಲ್ಲಿಯೂ ರೇಟ್ ಚಾರ್ಟ್ ನಡಿತಿದೆ ಎಂದು ಶರತ್ ಬಚ್ಚೇಗೌಡ ಹೇಳಿದ್ರು.
ಇದನ್ನು ಓದಿ :- ನಾಯಕತ್ವ ಬದಲಾವಣೆ ಬರೀ ಕಪೋಲ ಕಲ್ಪಿತ – ಅರುಣ್ ಸಿಂಗ್