ರಾಜ್ಯದಲ್ಲಿ ಇರೋದು 40 ಪರ್ಸೆಂಟ್ ಬಿಜೆಪಿ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಪರ್ಸೆಂಟೇಜ್ ಸರ್ಕಾರ ಒಬ್ಬ ಗುತ್ತಿಗೆದಾರನನ್ನ ಬಲಿ ಪಡೆದಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
![](https://rajnewskannada.in/wp-content/uploads/2022/05/Capture-4.png)
ಹೊಸಕೋಟೆಯ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಿನನಿತ್ಯ ಹೊಸ ಹೊಸ ಹಗರಣಗಳನ್ನ ಬಿಜೆಪಿ ಮಾಡ್ತಿದೆ. ಇವೆಲ್ಲಾ ಹಗರಣಗಳು ದಿನೇ ದಿನೇ ಮಾಧ್ಯಮಗಳಲ್ಲಿ ವರದಿಯಾಗ್ತಿವೆ. ಪಿಎಸ್ಐ ಆಯ್ಕೆ ಅಕ್ರಮ ಹಗರಣ ಈಗಾಗಲೇ ಬಯಲಿಗೆ ಬಂದಿದೆ. ಇದನ್ನು ಓದಿ :- ರಾಮನಗರ ಕ್ಲೀನ್ ಮಾಡ್ತೇನೆ ಅಂತ ಬಂದ್ರು ಇದೇನಾ ಕ್ಲೀನ್ ಎಂದ ಡಿಕೆಶಿ
![](https://rajnewskannada.in/wp-content/uploads/2022/05/sharth.png)
ಇದೊಂದೆ ಅಲ್ಲ ಪೊಸ್ಟಿಂಗಲ್ಲಿ ಆಗಿರಬಹುದು ಎಲ್ಲಾದಕ್ಕೂ ರೇಟ್ ಚಾರ್ಟ್ ಮಾಡಿದ್ದಾರೆ. ಬೆಂಗಳೂರಲ್ಲಿ ಎಸಿಪಿ, ಡಿಸಿಪಿಗೂ ರೇಟ್ ಚಾರ್ಟ್ ಇದೆ. ಟಿಹೆಚ್ಓ ಡಿಹೆಚ್ಓ ಹಾಕಿಸಿಕೊಳ್ಳೊಕೋ ರೇಟ್ ಪಿಕ್ಸ್ ಮಾಡಿದ್ದಾರೆ. ಈ ರೀತಿ ಮಾಡಿದ್ರೆ ಬಡವರಿಗೆ ಹೇಗೆ ನ್ಯಾಯ ಕೊಡಲಿಕ್ಕೆ ಹಾಗುತ್ತೆ. ಟಿಹಚ್ಓ ಹಣ ಕೊಟ್ಟು ಬಂದು ಬಡವರ ಆರೋಗ್ಯ ಹೇಗೆ ನೋಡ್ತಾರೇ. ಈ ರೀತಿ ಪರ್ಸೆಂಟೆಜ್ ಗಳು ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಹಾಗೇ ಹೊಸಕೋಟೆ ಯಲ್ಲಿಯೂ ರೇಟ್ ಚಾರ್ಟ್ ನಡಿತಿದೆ ಎಂದು ಶರತ್ ಬಚ್ಚೇಗೌಡ ಹೇಳಿದ್ರು.
ಇದನ್ನು ಓದಿ :- ನಾಯಕತ್ವ ಬದಲಾವಣೆ ಬರೀ ಕಪೋಲ ಕಲ್ಪಿತ – ಅರುಣ್ ಸಿಂಗ್