ಸಾಹಿತಿ ಕುಂ. ವೀರಭದ್ರಪ್ಪ(VEERABHADRAPPA ) ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ . ಸಾಹಿತಿ ವೀರಭದ್ರಪ್ಪ , ನಟ ಪ್ರಕಾಶ್ ರೈ, ಸೇರಿದಂತೆ ಓಟ್ಟು 61 ಜನರಿಗೆ ಬೆದರಿಕೆ ಪತ್ರ ಬಂದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಸಾಹಿತಿ ವೀರಭದ್ರಪ್ಪ ಮನೆಗೆ ಮತ್ತೊಂದು ಬೆದರಿಕೆ ಪತ್ರ ಬಂದಿತ್ತು . ಮೊದಲನೇಯ ಪತ್ರ ಭದ್ರಾವತಿಯಿಂದ ಬಂದರೆ, ಎರಡನೇಯ ಪತ್ರ ಚಿತ್ರದುರ್ಗದಿಂದ ಬಂದಿದೆ . ಈ ಹಿಂದೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್ಡಿಕೆ ಸೇರಿದಂತೆ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು . ಇದನ್ನೂ ಓದಿ : – ದಾವೋಸ್ ಪ್ರವಾಸಕ್ಕೆ ತೆರಳುವ ವಿಚಾರ ಇಂದು ತೀರ್ಮಾನ ಮಾಡ್ತೀವಿ – ಸಿಎಂ ಬೊಮ್ಮಾಯಿ
ಈ ಬಾರಿಯೂ ವೀರಭದ್ರಪ್ಪ ಸೇರಿದಂತೆ ಮಾಜಿ ಸಿಎಂ ಗಳಾದ ಎಚ್ಡಿಕೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಶ್ರೀ, ಬಿಕೆ ಹರಿಪ್ರಸಾದ್, ಪ್ರಕಾಶ್ ರೈ, ದಿನೇಶ್ ಗುಂಡೂರಾವ್ ಸೇರಿದಂತೆ 61 ಜನರಿಗೆ ಬೆದರಿಕೆ ಪತ್ರ ಬಂದಿದೆ . ನೀವು ಪೇಪರ್ ಹಿರೋ ಆಗಲು ಹೊರಟಿದ್ದೀರಿ ಅಂತ ಪತ್ರದಲ್ಲಿ ಹೇಳಲಾಗಿದೆ . ಮೊದಲ ಬಾರಿ ಪತ್ರ ಬಂದಾಗ, ವಿಜಯನಗರ ಎಸ್ಪಿಯಾದ ಡಾ. ಅರುಣ್ ಕೆ. ಅವರಿಗೆ ಭೇಟಿಯಾಗಿ ರಕ್ಷಣೆ ನೀಡಲು ವೀರಭದ್ರಪ್ಪ ಮನವಿ ಮಾಡಿದ್ದರು. ಇದನ್ನೂ ಓದಿ : – ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು