ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಕಳೆದ 11 ದಿನಗಳಿಂದ ಆಶ್ರಮವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ನಾಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆಸಿಡ್ ನಾಗನ ರೋಚಕ ಕಹಾನಿಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬಿಚ್ಚಿಟ್ಟಿದ್ದಾರೆ.
![Police Searching For Acid Naga – EESANJE / ಈ ಸಂಜೆ](https://www.eesanje.com/wp-content/uploads/2022/05/Acid-attack-800x445.jpg)
ಬೆಂಗಳೂರಿನಲ್ಲಿ ಮಾತನಾಡಿದ ಅವರು 7 ವರ್ಷಗಳಿಂದ ಯುವತಿ ಹಿಂದೆ ನಾಗೇಶ್ ಬಿದ್ದಿದ್ದ. ಆಕೆ ಈತನನ್ನು ರಿಜೆಕ್ಟ್ ಮಾಡಿದಾಗ ಸ್ನೇಹಿತನಿಂದ ಆಕೆಯ ಪ್ರತೀ ಇನ್ಫಾರ್ಮೇಶನ್ ಪಡೆಯುತ್ತಿದ್ದ. ಆಕೆಯ ಹಿಂದೆ ಹೋಗಿ ಪ್ರೀತಿ ಬಗ್ಗೆ ಹೇಳಿದ್ದಾನೆ. ಆಗ ಮನೆಯವ್ರು ಬೈದು ಕಳಿಸಿದ್ದಾರೆ. ಅವಾಗ್ಲೇ ಆರೋಪಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಲು ಫಿಕ್ಸ್ ಆಗಿದ್ದ. ತನ್ನ ಕಾಂಟ್ಯಾಕ್ಟ್ ನಲ್ಲಿರೋ ವ್ಯಕ್ತಿಗೆ ಇಮೇಲ್ ಮೂಲಕ ದಾಖಲೆ ನೀಡಿ ಆ್ಯಸಿಡ್ ಖರೀದಿಸಿದ್ದ. 2020 ರಲ್ಲೇ ಎಂಟು ಲೀಟರ್ ಆ್ಯಸಿಡ್ ಖರೀದಿಸಿದ್ದ.
![Acid naga s distorted feeling in front of the police | ಪೊಲೀಸರ ಮುಂದೆ ವಿಕೃತ ಭಾವನೆ ಹೊರಹಾಕಿದ ಆ್ಯಸಿಡ್ ನಾಗ Crime News in Kannada](https://kannada.cdn.zeenews.com/kannada/sites/default/files/2022/05/14/239426-acid-naga.jpg)
ಆದ್ರೆ ಯುವತಿ ಮೇಲೆ ಆ್ಯಸಿಡ್ ಹಾಕೋದ್ರ ಬಗ್ಗೆ ಯೋಚನೆ ಮಾಡಿ. ಮನಸ್ಸು ಬದಲಾಯಿಸ್ತಾನೆ. ಆಕೆಯನ್ನು ಮತ್ತೆ ಕೇಳಿ ಕನ್ವೆನ್ಸ್ ಮಾಡಿದ್ರಾಯ್ತು ಅಂತಾ ಸುಮ್ನಾಗ್ತಾನೆ. ಏ. 20ನೇ ತಾರೀಕು ಮತ್ತೆ ಯುವತಿಯ ಬಳಿ ಹೋಗಿ ಪ್ರಪೋಸ್ ಮಾಡ್ತಾನೆ. ಆಗ ಯುವತಿ ನೀನು ಅಣ್ಣನ ತರ ನಿನ್ಮೇಲೆ ನನಗೆ ಯಾವುದೇ ಪ್ರೀತಿ ಇಲ್ಲ ಅಂತಾ ಹೇಳಿದ್ದಾಳೆ. ಮತ್ತೆ 2020 ರಲ್ಲಿ ಇಮೇಲ್ ಮೂಲಕ ಮತ್ತೆ ಆ್ಯಸಿಡ್ ಖರೀದಿಸ್ತಾನೆ . ಯುವತಿ ಮೇಲೆ 28ರಂದು ಆ್ಯಸಿಡ್ ಹಾಕ್ತಾನೆ. 28ನೇ ತಾರೀಕು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಆ್ಯಸಿಡ್ ಕೇಸ್ ದಾಖಲಾಗಿತ್ತು. ಆರೋಪಿ ಯಾವುದೇ ಸುಳಿವು ನೀಡದಂತೆ ಎಸ್ಕೇಪ್ ಆಗಿದ್ದ. ಜನರಲ್ಲಿ ಈ ಕೇಸ್ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಪಶ್ಚಿಮ ವಿಭಾಗದ ಪೊಲೀಸರಿಂದ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ : – ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿನೇ ಕಾರಣ – ಪೊಲೀಸರ ಮುಂದೆ ಆ್ಯಸಿಡ್ ನಾಗ ಸ್ಫೋಟಕ ಹೇಳಿಕೆ
![Bengaluru Acid Attack Case Accused Nagesh Arrested in Tiruvannamalai | Bengaluru Acid Attack: ಸ್ವಾಮೀಜಿ ವೇಷತೊಟ್ಟು ಎಸ್ಕೇಪ್ ಆಗಿದ್ದ ಆ್ಯಸಿಡ್ ನಾಗ ಅರೆಸ್ಟ್!Karnataka News in Kannada](https://kannada.cdn.zeenews.com/kannada/sites/default/files/styles/zm_700x400/public/2022/05/13/239366-acid-naga.png?itok=pqgxdlr_)
ನಿನ್ನೆ ತಮಿಳುನಾಡಿನಲ್ಲಿ ಆರೋಪಿಯನ್ನ ಬಂಧಿಸೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಈ ವರೆಗೆ ಬಂದಿರೋ ಮಾಹಿತಿ ಪ್ರಕಾರ 7 ವರ್ಷದ ಹಿಂದೆ ಯುವತಿ ಮತ್ತು ಆರೋಪಿ ಒಂದೇ ಬಿಲ್ಡಿಂಗ್ ನಲ್ಲಿ ವಾಸಿಸ್ತಿದ್ರು. ಆ ವೇಳೆ ಆರೋಪಿ ಯುವತಿಗೆ ಪ್ರಪೋಸ್ ಮಾಡಿದ್ದ. ಈ ವೇಳೆ ಯುವತಿ ನಿರಾಕರಿಸಿದ್ರು. ಯುವತಿ ಮನೆಯಲ್ಲಿದ್ದ ಆರೋಪಿ ಸ್ನೇಹಿತನಿಂದ ಯುವತಿ ಬಗ್ಗೆ ಕೆಲವೊಂದು ಮಾಹಿತಿ ಪಡೀತಿದ್ದ. ಆರೋಪಿ ಮೊಬೈಲ್, ಲ್ಯಾಪ್ಟಾಪ್ ಏನೂ ಬಳಸ್ತಿರಲಿಲ್ಲ. ಹೀಗಾಗಿ ಆತನನ್ನ ಹುಡುಕಾಡೋವಾಗ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿರಲಿಲ್ಲ. ತಮಿಳುನಾಡಿನಲ್ಲಿ ಪೊಲೀಸ್ ತಂಡಗಳು ಹುಡುಕಾಡೋಕೆ ಬಿಟ್ಟಿದ್ವಿ. ಆರೋಪಿಯ ಹುಡುಕಾಟಕ್ಕಾಗಿ ನಮ್ಮ ಪೊಲೀಸರು ಕರಪತ್ರಗಳನ್ನ ಹಂಚೋಕೆ ಶುರು ಮಾಡಿದ್ವು. ತಿರುವಣ್ಣಾಮಲೈ ನಲ್ಲೂ ಕರಪತ್ರ ಅಂಟಿಸಲಾಗಿತ್ತು. ನಿನ್ನೆ ಬೆಳಗ್ಗೆ 11ಗಂಟೆಗೆ ಕರಪತ್ರ ಹಂಚಲಾಗಿತ್ತು. ಇದನ್ನೂ ಓದಿ : – ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು
![Bengaluru Acid Attack accused Nagesh hurt in police firing mrq | Acid Naga: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ; ಆಸಿಡ್ ನಾಗನ ಕಾಲಿಗೆ ಗುಂಡೇಟು– News18 Kannada](https://images.news18.com/kannada/uploads/2022/05/Untitled-design-10-16524907283x2.jpg?im=Resize,width=360,aspect=fit,type=normal)
ಅದನ್ನ ನೋಡಿ ಸ್ಥಳೀಯರು ಅಲ್ಲೇ ಇದ್ದ ನಮ್ಮ ಸಿಬ್ಬಂದಿಗೆ ಕರೆ ಮಾಡಿದ್ದಾರೆ.ಕೂಡಲೇ ಆಶ್ರಮಕ್ಕೆ ಹೋದಾಗ ಆರೋಪಿ ಮೆಡಿಟೇಷನ್ ಮಾಡ್ತಿದ್ದ. ಹೋದಾಗ ಆರೋಪಿಯ ಹೆಸ್ರು ಕೇಳಿದ್ದಾರೆ. ಆದ್ರೆ ಆರೋಪಿ ಬಾಯ್ಬಿಟ್ಟಿರಲಿಲ್ಲ. ಸ್ವಲ್ಪ ಜೋರಾಗಿ ಕೇಳಿದಾಗ ಆರೋಪಿ ತಾನೆ ಎಂಬುದನ್ನ ಒಪ್ಪಿಕೊಂಡಿದ್ದಾನೆ. ಹೊಸಕೋಟೆಯಲ್ಲಿ ತಾನು ಮಾಡಿದ ತಪ್ಪು ಅರಿವಾಗಿ ಆತ್ಮಹತ್ಯೆ ಮಾಡಿಕೊಳ್ಳೋಕೆ ನಿರ್ಧಾರ ಮಾಡಿದ್ದ. ಅಲ್ಲಿನ ಒಂದು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋಕೆ ನಿರ್ಧಾರ ಮಾಡಿದ್ದ. ಆದ್ರೆ ಮತ್ತೆ ಮನಸು ಬದಲಾಯಿಸಿ ತಿರುಪತಿಗೆ ಹೋಗೋಕೆ ಮುಂದಾಗಿದ್ದ. ಆಗ ಮತ್ತೆ ಮನಸ್ಸು ಬದಲಾಯಿಸಿ ತಿರುವಣ್ಣಾಮಲೈ ಗೆ ಹೋಗಿದ್ದಾನೆ. ಈ ಕೇಸ್ ನಲ್ಲಿ ಸಾಕಷ್ಟು ಎವಿಡೆನ್ಸ್ ಗಳು ಇವೆ. ನ್ಯಾಯಾಲಯಕ್ಕೆ ಶೀಘ್ರವಾಗಿ ಟ್ರೈಯಲ್ ಗೆ ಮನವಿ ಮಾಡ್ತೀವಿ.. 15-20 ದಿನಗಳ ಮುಂಚೆಯೇ ನಾವು ಚಾರ್ಜ್ ಶೀಟ್ ಸಲ್ಲಿಸ್ತೀವಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ರು .
ಇದನ್ನೂ ಓದಿ : – ನಾಗೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಧನ್ಯವಾದ