ವಿಜಯನಗರ ( vijaynagara ) ಜಿಲ್ಲೆ ಹೊಸಪೇಟೆ ( hospete ) ತಾಲೂಕಿನ ಬೈಲುವದ್ದಿಗೆರಿ(bailuvaddigeri ) ಗ್ರಾಮದಲ್ಲಿ ಸ್ವಂತ ಶಾಲಾ (school ) ಕಟ್ಟಡವಿಲ್ಲದೆ ಮಕ್ಕಳು ( students ) ಪರದಾಡುತ್ತಿದ್ದಾರೆ. ಆನಂದಸಿಂಗ್ (Anand singh ) , ಶಶಿಕಲಾ ಜೊಲ್ಲೆ (shashi kala jolle ) ಸಚಿವರ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಸ್ವಂತ ಕಟ್ಟಡವಿಲ್ಲ .
8, ಮತ್ತು 9ನೇ ತರಗತಿ ವಿಧ್ಯಾರ್ಥಿಗಳ ಪಾಡು ಹೇಳತೀರದಾಗಿದೆ . ಸುಮಾರು ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ದೇವಸ್ಥಾನದ ಆವರಣವೇ ಪಾಠ ಪ್ರವಚನಗಳ ಕೇಂದ್ರವಾಗಿದೆ. ದೇವಸ್ಥಾನದ ಆವರಣದಲ್ಲಿ ಮದುವೆ ಕಾರ್ಯಗಳಿದ್ರೆ ಅಂದು ಶಾಲೆಗೆ ಶಿಕ್ಷಕರು ರಜೆ ಘೋಷಿಸುತ್ತಾರೆ . ಇದ್ದ ಶಾಲಾ ಕಟ್ಟಡವನ್ನ ರಾಷ್ಟ್ರಿಯ ಹೆದ್ದಾರಿ 67 ರ ರಸ್ತೆ ವಿಸ್ತರಣೆ ಸಂರ್ಧಭದಲ್ಲಿ ನೆಲಸಮ ಮಾಡಿದ್ದಾರೆ . ಶಾಲಾ ಮಕ್ಕಳ ಶೌಚಾದಿಕ್ರಿಯೆಗಳಿಗೂ ಬಯಲೆ ಆಸರೆಯಾಗಿದೆ . ಸುಡುಗಾಡೆಪ್ಪ ದೇವಸ್ಥಾನದ ಆವರಣದಲ್ಲಿಯೆ ಶಿಕ್ಷಕರಿಂದ ಮಕ್ಕಳಿಗೆ ಪಾಠ ಭೊಧನೆಯಾಗುತ್ತದೆ . ಸ್ವಂತ ಕಟ್ಟಡ ಕಲ್ಪಿಸುವಂತೆ ಇಲ್ಲವೇ ಪಕ್ಕದ ಧರ್ಮಸಾಗರ ಗ್ರಾಮದ ಸರ್ಕಾರಿ ಶಾಲೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ . ಇದನ್ನೂ ಓದಿ : –ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ – ಶಾಲಾ ಬಾಲಕಿಯ ದುರ್ಮರಣ