ವಿಜಯನಗರದಲ್ಲಿ ದೇವಸ್ಥಾನದ ಆವರಣದಲ್ಲಿ ಮಕ್ಕಳಿಗೆ ಪಾಠ – ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ

ವಿಜಯನಗರ ( vijaynagara ) ಜಿಲ್ಲೆ ಹೊಸಪೇಟೆ ( hospete ) ತಾಲೂಕಿನ ಬೈಲುವದ್ದಿಗೆರಿ(bailuvaddigeri ) ಗ್ರಾಮದಲ್ಲಿ ಸ್ವಂತ ಶಾಲಾ (school ) ಕಟ್ಟಡವಿಲ್ಲದೆ ಮಕ್ಕಳು ( students ) ಪರದಾಡುತ್ತಿದ್ದಾರೆ. ಆನಂದಸಿಂಗ್ (Anand singh ) , ಶಶಿಕಲಾ ಜೊಲ್ಲೆ (shashi kala jolle ) ಸಚಿವರ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಸ್ವಂತ ಕಟ್ಟಡವಿಲ್ಲ .

8, ಮತ್ತು 9ನೇ ತರಗತಿ ವಿಧ್ಯಾರ್ಥಿಗಳ ಪಾಡು ಹೇಳತೀರದಾಗಿದೆ . ಸುಮಾರು ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ದೇವಸ್ಥಾನದ ಆವರಣವೇ ಪಾಠ ಪ್ರವಚನಗಳ ಕೇಂದ್ರವಾಗಿದೆ. ದೇವಸ್ಥಾನದ ಆವರಣದಲ್ಲಿ ಮದುವೆ ಕಾರ್ಯಗಳಿದ್ರೆ ಅಂದು ಶಾಲೆಗೆ ಶಿಕ್ಷಕರು ರಜೆ ಘೋಷಿಸುತ್ತಾರೆ . ಇದ್ದ ಶಾಲಾ ಕಟ್ಟಡವನ್ನ ರಾಷ್ಟ್ರಿಯ ಹೆದ್ದಾರಿ 67 ರ ರಸ್ತೆ ವಿಸ್ತರಣೆ ಸಂರ್ಧಭದಲ್ಲಿ ನೆಲಸಮ ಮಾಡಿದ್ದಾರೆ . ಶಾಲಾ ಮಕ್ಕಳ ಶೌಚಾದಿಕ್ರಿಯೆಗಳಿಗೂ ಬಯಲೆ ಆಸರೆಯಾಗಿದೆ . ಸುಡುಗಾಡೆಪ್ಪ ದೇವಸ್ಥಾನದ ಆವರಣದಲ್ಲಿಯೆ ಶಿಕ್ಷಕರಿಂದ ಮಕ್ಕಳಿಗೆ ಪಾಠ ಭೊಧನೆಯಾಗುತ್ತದೆ . ಸ್ವಂತ ಕಟ್ಟಡ ಕಲ್ಪಿಸುವಂತೆ ಇಲ್ಲವೇ ಪಕ್ಕದ ಧರ್ಮಸಾಗರ ಗ್ರಾಮದ ಸರ್ಕಾರಿ ಶಾಲೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ . ಇದನ್ನೂ ಓದಿ : –ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ – ಶಾಲಾ ಬಾಲಕಿಯ ದುರ್ಮರಣ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!