ಸಾಲದ ಸುಳಿಯಲ್ಲಿ ಮುಳುಗಿ ಆದಾಯ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ ಭಾರಿ ಪ್ರಮಾಣದ ವಿದ್ಯುತ್ ಅಭಾವ ಎದುರಿಸುತ್ತಿದೆ. ಜತೆಗೆ, ರಷ್ಯಾ-ಉಕ್ರೇನ್ ಸಮರದ ಅಡ್ಡ ಪರಿಣಾಮವಾಗಿ ಕಚ್ಚಾ ತೈಲ ದರ ಗಣನೀಯ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಬಾಂಗ್ಲಾ( Bangladesh ) ದಲ್ಲಿ ಕತ್ತಲು ಆವರಿಸುವ ಭೀತಿ ಎದುರಾಗಿದೆ.
ಶಾಲೆಗಳು ಮತ್ತು ಸರಕಾರಿ-ಖಾಸಗಿ ಕಚೇರಿಗಳ ಕಾರ್ಯಾವಧಿಯನ್ನು ಸರಕಾರ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಎಲ್ಲಾ ಶಾಲೆಗಳು ಕಡ್ಡಾಯವಾಗಿ ಶುಕ್ರವಾರದಿಂದ ಭಾನುವಾರದವರೆಗೆ ಬಂದ್ ಆಗಿರಬೇಕು. ಜತೆಗೆ ಕಚೇರಿಗಳು, ಬ್ಯಾಂಕ್ಗಳು ವಾರಾಂತ್ಯ ರಜೆ ಘೋಷಿಸಿ, ಉಳಿದ ದಿನಗಳಲ್ಲಿ ಕೇವಲ 7 ಗಂಟೆಗಳು ಮಾತ್ರವೇ ಕೆಲಸ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ : – ರಾಜ್ಯದ ಪ್ರತಿಷ್ಟಿತ ಸ್ವಾಮೀಜಿಯಿಂದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ದೂರು ದಾಖಲು
ಕಚ್ಚಾ ತೈಲ ದರ ಹೆಚ್ಚಿದ ಪರಿಣಾಮ ಬಾಂಗ್ಲಾದೇಶದಲ್ಲಿ ಕಳೆದ ತಿಂಗಳು ಡೀಸೆಲ್ ಚಾಲಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ಬಂದ್ ಮಾಡಲಾಯಿತು. ಪರಿಣಾಮ ಒಂದು ಸಾವಿರ ಮೆಗಾ ವ್ಯಾಟ್ಸ್ಗಳಷ್ಟು ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಕಳೆದ ಜುಲೈನಲ್ಲಿ ಬಾಂಗ್ಲಾದೇಶ ಸರಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಅನಿರ್ದಿಷ್ಟ ಪ್ರಮಾಣದ ಸಾಲಕ್ಕೆ ಬೇಡಿಕೆ ಇಟ್ಟಿತ್ತು. ಪಾಕಿಸ್ತಾನ ( PAKISTHAN ) ಶ್ರೀಲಂಕಾ ಬಳಿಕ ಐಎಂಎಫ್ ಬಾಗಿಲು ತಟ್ಟಿದ ದಕ್ಷಿಣ ಏಷ್ಯಾದ ಮೂರನೇ ರಾಷ್ಟ್ರ ಬಾಂಗ್ಲಾದೇಶ ಎನಿಸಿದೆ.
ಇದನ್ನೂ ಓದಿ : – ಬೆಂಗಳೂರು, ಕರಾವಳಿ, ಮಲೆನಾಡಿನಲ್ಲಿ ಇಂದು ಗುಡುಗು ಸಹಿತ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ