ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರಳುವಂತೆ ರಾಹುಲ್ ಗಾಂಧಿ (Rahul gandhi) ಮನವೊಲಿಸಲಾಗುವುದು ಎಂದು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಹೇಳಿದ್ದಾರೆ.
ರಾಹುಲ್ ಗಾಂಧಿ ಅವರಂತೆ ಕಾಂಗ್ರೆಸ್ ಪಕ್ಷದಲ್ಲಿ ಪ್ಯಾನ್ ಇಂಡಿಯಾ ಪ್ರಭಾವಳಿ ಹೊಂದಿರುವ ಬೇರೆ ಯಾವ ನಾಯಕನೂ ಇಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಪಕ್ಷವನ್ನು ಮುನ್ನೆಸುವ ಆಕಾಂಕ್ಷೆ ಹೊಂದಿರುವ ಯಾವುದೇ ವ್ಯಕ್ತಿಯು ದೇಶಾದ್ಯಂತ ಪರಿಚಿತನಾಗಿರಬೇಕು. ಅವರಿಗೆ ಕನ್ಯಾಕುಮಾರಿ (Kanyakumari) ಯಿಂದ ಕಾಶ್ಮೀರ (Kashmir) ದವರೆಗೆ ಮತ್ತು ಪಶ್ಚಿಮ ಬಂಗಾಳ (West bengal) ದಿಂದ ಗುಜರಾತ್ವರೆಗೂ ಬೆಂಬಲ ಹೊಂದಿರಬೇಕು. ಪಕ್ಷದ ಅಧ್ಯಕ್ಷ ಸ್ಥಾನ ಬಯಸುವ ವ್ಯಕ್ತಿ ಬಹಳ ಜನಪ್ರಿಯರಾಗಿರಬೇಕು ಎಂದು ತಿಳಿಸಿದ್ದಾರೆ.
ಗುಲಾಂ ನಬಿ ರಾಜೀನಾಮೆ ಸರಿಯಲ್ಲ
ಗುಲಾಂನಬಿ ಆಜಾದ್ (Gulam nabi azad) ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಕುರಿತಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಬಿ ರಾಜೀನಾಮೆ ಕೊಟ್ಟಿರೋದು ಸರಿಯಲ್ಲ. ಪಕ್ಷದಲ್ಲಿ 49 ವರ್ಷದಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪಕ್ಷದಲ್ಲಿ ಎಲ್ಲಾ ಅಧಿಕಾರವನ್ನೂ ಪಡೆದಿದ್ದಾರೆ ಎಂದು ಹೇಳಿದರು. 6 ಭಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಇದನ್ನೂ ಓದಿ : – ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ- ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಅಥ್ಲೀಟ್!
20-25 ವರ್ಷಗಳ ಕಾಲ ಸಚಿವರಾಗಿಯೂ ಇದ್ದರೂ. ಪಕ್ಷದಮಟ್ಟದಲ್ಲೂ ಅತ್ಯುತ್ತಮ ಸ್ಥಾನಗಳನ್ನ ಪಡೆದಿದ್ದರು. ಪಕ್ಷಕ್ಕೆ ಒಳ್ಳೆಯ ಪರಿಸ್ಥಿತಿ ಇಲ್ಲ. ಹಲವು ವರ್ಷ ಪಕ್ಷದಲ್ಲಿ ಎಂಜಾಯ್ ಮಾಡಿ ಹೋಗುತ್ತಿರೋದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಎಲ್ಲಾ ಸ್ಥಾನಮಾನ ಪಡೆದು ಈಗ ಪಕ್ಷ ಬಿಡುವಾಗ ನಾಯಕರ ಮೇಲೆ ಆಪಾದನೆ ಮಾಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ಬಾಂಗ್ಲಾ ದೇಶದಲ್ಲಿ ವಿದ್ಯುತ್ ಕೊರತೆ, 4 ದಿನ ಮಾತ್ರ ಶಾಲೆ, ಕೇವಲ 7 ಗಂಟೆ ಬ್ಯಾಂಕ್ ಓಪನ್