ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಕೊಲೆಗಡುಕನನ್ನು ದೊಡ್ಡಬೆಳವಂಗಲ ( doddabelavangala ) ಪೊಲೀಸರು ಬಂಧಿಸಿದ್ದಾರೆ . ಕಾರ್ ಡ್ರೈವರ್ ರಿಯಾಜ್ ಪಾಷ (riyaz pasha ) ಬಂಧಿತ ಕೊಲೆ ಆರೋಪಿ. ಕಳೆದ 15 ರಂದು ಮನೆ ಮುಂದೆ ಗೃಹಿಣಿಯನ್ನ ಚಾಕುವಿನಿಂದ ಚುಚ್ಚಿ ಕಿರಾತಕ ಕೊಲೆ ಮಾಡಿದ್ದ.
![](https://rajnewskannada.in/wp-content/uploads/2022/05/mur.png)
ದೊಡ್ಡಬಳ್ಳಾಪುರ ( Doddabalapura ) ತಾಲೂಕಿನ ವಡಗೆರೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಮಕ್ಕಳ ಮುಂದೆ ಭಾಗ್ಯಶ್ರೀ (bhagyashree) ಎಂಬ ಗೃಹಿಣಿಯನ್ನ ಕೊಲೆ ಮಾಡಿ ರಿಯಾಜ್ ಎಸ್ಕೇಪ್ ಆಗಿದ್ದ . ಗಂಡ ಬೆಳ್ಳಂ ಬೆಳಗ್ಗೆ ಗೃಹ ಪ್ರವೇಶಕ್ಕೆ ಹೋಗ್ತಿದ್ದಂತೆ ಬಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ, ಕೊಲೆ ಮಾಡಿ ರಾಯಚೂರಿನ ಲಿಂಗಸಗೂರಿನಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದ . ದೊಡ್ಡಬೆಳವಂಗಲ ಪಿಎಸ್ಐ ಜ್ನಾನ ಮೂರ್ತಿ ತಂಡದ ನೇತೃತ್ವದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ . ಮೃತ ಭಾಗ್ಯ ಬೇರೋಬ್ಬನ ಜೊತೆ ಸಂಬಂಧ ಹೊಂದಿದ್ದಾಳೆ ಅಂತ ಆರೋಪಿ ಕೊಲೆ ಮಾಡಿದ್ದಾನೆ . ತನ್ನ ಜೊತೆ ಸರಿಯಾಗಿ ಮಾತನಾಡದೆ ಬೇರೆಯವನ ಸಹವಾಸ ಮಾಡ್ತಿದ್ದಾಳೆ ಅಂತ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ತಾನು ಖರ್ಚು ಮಾಡಿದ್ದ ಹಣ ವಾಪಸ್ ಕೊಡುವಂತೆ ರಿಯಾಜ್ ಕೇಳಿದ್ದ . ಇದೀಗ ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ . ಇದನ್ನೂ ಓದಿ : – ದರ ಏರಿಕೆಯ ಬಿಸಿ, ಹಣದುಬ್ಬರದ ಆತಂಕ – 6 ವರ್ಷಗಳ ಬಳಿಕ ಮೊದಲ ಬಾರಿಗೆ ಸಕ್ಕರೆ ರಫ್ತಿಗೆ ಕೇಂದ್ರ ನಿರ್ಬಂಧ