ಚೆನ್ನೈ : ಕೋವಿಡ್ ಪರಿಹಾರ ನಿಧಿಗೆ ಸುಪರ್ ಸ್ಟಾರ್ ನಟ ರಜನಿಕಾಂತ್ 50 ಲಕ್ಷ ರೂಪಾಯಿಗಳನ್ನ ನೀಡಿದ್ದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಚೆಕ್ನ್ನು ಹಸ್ತಾಂತರಿಸಿದರು.
ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಹಲವು ನಟ ನಟಿಯರು ನೆರವಾಗಿದ್ದು, ಸಧ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೊರೊನಾ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ನಂತರ ಮಾತನಾಡಿದ ನಟ ರಜನಿಕಾಂತ್, ಸಾಂಕ್ರಾಮಿಕ ರೋಗವನ್ನ ನಿಯಂತ್ರಿಸಲು ಸರ್ಕಾರ ಒಲವು ತೋರಿರುವ ಕೋವಿಡ್ ನಿರ್ಬಂಧವನ್ನ ಕಟ್ಟುನಿಟ್ಟಾಗಿ ಅನುಸರಿಸುವಂತೆ ನಾನು ಜನತೆಗೆ ಮನವಿ ಮಾಡಿದೆ ಎಂದು ತಿಳಿಸಿದರು.