AL QUEDA – ಭಾರತದಲ್ಲಿ ಆತ್ಮಾಹುತಿ ದಾಳಿಗೆ ಆಲ್ ಖೈದಾ ಪ್ಲಾನ್ – ಪ್ರವಾದಿ ಟೀಕೆಗೆ ಸೇಡು ತೀರಿಸುವ ಎಚ್ಚರಿಕೆ

ಪ್ರವಾದಿ ಮಹಮ್ಮದ್ (Mohamed) ಕುರಿತಾಗಿ ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur sharma) ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಪ್ರತೀಕಾರವಾಗಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸುವುದಾಗಿ ಅಲ್ ಕೈದಾ ಉಗ್ರ ಸಂಘಟನೆ ಬೆದರಿಕೆ ಒಡ್ಡಿದೆ.

ತನ್ನ ‘ಮುಜಾಹಿದ್ದೀನ್’ಗಳು ದಿಲ್ಲಿ, ಮುಂಬಯಿ (Mumbai) , ಗುಜರಾತ್ (Gujrat) ಮತ್ತು ಉತ್ತರ ಪ್ರದೇಶಗಳಲ್ಲಿ (Uttar pradesh) ತಮ್ಮನ್ನು ತಾವು ಸ್ಫೋಟಿಸಿಕೊಳ್ಳಲು ಈಗಾಗಲೇ ಸಿದ್ಧರಾಗಿದ್ದಾರೆ ಎಂದು ಅಲ್ ಖೈದಾ (al-Qaeda) ಸಂಘಟನೆಯ ಅಧಿಕೃತ ಮುಖವಾಣಿ ಆಸ್- ಸಹಾಬ್ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದೆ. ಉಗ್ರ ಸಂಘಟನೆಯ ಅನುಯಾಯಿಗಳು ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುವ ವಿಡಿಯೋವನ್ನು ಕೂಡ ಅಲ್ ಕೈದಾ ಟೆಲಿಗ್ರಾಂ (Telegram) ಚಾನೆಲ್ ಒಂದು ಹಂಚಿಕೊಂಡಿದೆ.

“ಕೇಸರಿ ಉಗ್ರರು ದಿಲ್ಲಿ, ಬಾಂಬೆ, ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ತಮ್ಮ ಅಂತ್ಯಕ್ಕೆ ಇನ್ನು ಕಾಯಬೇಕಿದೆ. ಅವರು ತಮ್ಮ ಮನೆಗಳಲ್ಲಿ ಅಥವಾ ಸೇನಾ ದಂಡಿನ ಭದ್ರ ಕೋಟೆಗಳಲ್ಲಿ ಕೂಡ ಆಶ್ರಯ ಕಂಡುಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರೀತಿಯ ಪ್ರವಾದಿಯ ಪರವಾಗಿ ಸೇಡು ತೀರಿಸಿಕೊಳ್ಳದೆ ಹೋದರೆ ನಮ್ಮ ತಾಯಂದಿರು ಬಲಿಪಶುಗಳಾಗುತ್ತಾರೆ” ಎಂದು ಬೆದರಿಕೆ ಪತ್ರದಲ್ಲಿ ಅಲ್ ಕೈದಾ (Al-queda) ಹೇಳಿದೆ.

ಆಲ್ ಖೈದಾ ಬರೆದ ಪತ್ರ

ಭಾರತದಲ್ಲಿನ ವಿಚಾರಗಳಲ್ಲಿ ಉಗ್ರಗಾಮಿ ಸಂಘಟನೆಯು ಮಧ್ಯಪ್ರವೇಶ ಮಾಡಲು ಪ್ರಯತ್ನಿಸುತ್ತಿರುವುದು ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಸಲ. ಏಪ್ರಿಲ್ನಲ್ಲಿ ಅದು ಹಿಜಾಬ್ ವಿವಾದದ ಬಗ್ಗೆ ಮೂಗು ತೂರಿಸಲು ಪ್ರಯತ್ನಿಸಿತ್ತು. ಮಂಡ್ಯದಲ್ಲಿ ವಿದ್ಯಾರ್ಥಿಗಳ ಗುಂಪಿನ ಎದುರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ಳನ್ನು ಅಲ್ ಕೈದಾ ಮುಖ್ಯಸ್ಥ ಜವಾಹಿರಿ ಶ್ಲಾಘಿಸಿದ್ದ. ಇದನ್ನೂ ಓದಿ :- ಮೈಕ್ ದಂಗಲ್ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!