ಸಿದ್ದರಾಮಯ್ಯಗೆ 50 ಚಡ್ಡಿ ಕೋರಿಯರ್ ಮಾಡಿದ ಬಿಜೆಪಿ ಕಾರ್ಯಕರ್ತರು

ರಾಜ್ಯದಲ್ಲಿ ಚಡ್ಡಿ ಪರ ವಿರೋಧ ಹಿನ್ನೆಲೆ ಸಿಎಂ ತವರು ಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯಗೆ 50 ಚಡ್ಡಿಗಳನ್ನು ಕೋರಿಯರ್ ಮಾಡಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವ ಪಟ್ಣಣದಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತರು ಚಡ್ಡಿಗಳನ್ನು ನಗರದಲ್ಲಿ ಮೆರವಣಿಗೆ ಮಾಡಿ ಪಾರ್ಸೇಲ್ ಮಾಡಿದ್ದಾರೆ.

ಅಲ್ಲದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಚಡ್ಡಿ ತಲುಪಿಸಿ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಿದ್ದು ನಿವಾಸಕ್ಕೆ ಚಡ್ಡಿ ತಲುಪಿದೆ. ಕಾಂಗ್ರೆಸ್ ನವರು ಚಡ್ಡಿ ಸುಡುತ್ತಾನೇ ಇರಲಿ. ಇವತ್ತು ಆರ್ ಎಸ್ ಎಸ್ ಗುರಿ ಮಾಡಿ ಹೇಳಿರಬಹುದು. ಇದನ್ನೂ ಓದಿ : – ಸಿದ್ದು ನಿವಾಸಕ್ಕೆ ಚಡ್ಡಿ ತಲುಪಿಸಿದ ಛಲವಾದಿ ನಾರಾಯಣಸ್ವಾಮಿ

ಇವತ್ತು ಆರ್ ಎಸ್ ಎಸ್ ಇಲ್ಲ ಅಂದಿದ್ರೆ ನಿಮ್ಮ ಚಡ್ಡಿಯನ್ನೇ ಕಿತ್ತುಕೊಂಡು ಹೋಗ್ಬಿಡ್ತಿದ್ರು. ಇನ್ಮುಂದೆ ನಿಮ್ಮ ಚಡ್ಡಿಯನ್ನು ಭದ್ರ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರಿಗೆ ಚಡ್ಡಿ ತಂದ ಕಾರ್ಯಕರ್ತರನ್ನೂ ವಿಪಕ್ಷ ನಾಯಕರ ಮನೆಯತ್ತ ಬಿಡದ ಪೊಲೀಸರು ಅವರನ್ನು ಅರ್ಧದಲ್ಲಿಯೇ ತಡೆದರು. ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಸೇರಿದಂತೆ ಇನ್ನಿತರ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಇದನ್ನೂ ಓದಿ : – RSS ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ – ವಿ. ಸೋಮಣ್ಣ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!