ವೇಗವಾಗಿ ಬಂದ ಆಂಬುಲೆನ್ಸ್(Ambulance) ಕಾರಿಗೆ ಡಿಕ್ಕಿ (Car) ಹೊಡೆದಿರುವ ಘಟನೆ ನೆಲಮಂಗಲ (Nelamangala) ನಗರದ ರಾಯನ್ ನಗರದ ಬಳಿ ನಡೆದಿದೆ. ಆಂಬುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿಯಾಗಿದೆ.
![](https://rajnewskannada.in/wp-content/uploads/2022/06/image-183-1024x776.png)
ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕನ ವೇಗದ ನಿರ್ಲಕ್ಷ್ಯಕ್ಕೆ ಈ ಘಟನೆ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಆಂಬುಲೆನ್ಸ್ ಚಾಲಕ ಅಪಘಾತದ ಬಳಿಕ ಆಂಬುಲೆನ್ಸ್ ಸಮೇತ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ : – ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ -ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ