ರಾಜ್ಯದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೀತಾ ಇದೆ. ಪಿಎಂ ಹೇಳಿದ್ರು ನಾನು ಭ್ರಷ್ಟಾಚಾರ ಮಾಡಲ್ಲ. ಮಾಡೋದಕ್ಕೆ ಬಿಡಲ್ಲ. ಮಿಸ್ಟರ್ ಮೋದಿ ಎಲ್ಲಿದ್ದೀಯಾಪ್ಪ. ಪಿಎಸ್ ಐ ಒಂದೇ ಅಲ್ಲ ಕೆಪಿಎಎಸ್ಸಿ ನಲ್ಲೂ ಭ್ರಷ್ಟಾಚಾರ ನಡೀತಾ ಇದೆ ಎಂದು ಉಗ್ರಪ್ಪ ಹೇಳಿದ್ದಾರೆ.
![](https://rajnewskannada.in/wp-content/uploads/2022/05/ugrappa-bccl-1024x768.jpg)
ಕೆಂಪಣ್ಣ ಪತ್ರ ಬರೆದು ಒಂದು ವರ್ಷ ಆಗ್ತಾ ಬರ್ತಾ ಇದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಯಾದ್ರೂ ಪಿಎಂ ಎಚ್ಷೆತ್ತುಕೊಂಡಿಲ್ಲ. ಪಿಎಂ ಕಚೇರಿಯಿಂದಲೇ ಇದಕ್ಕೆ ಕುಮ್ಮಕ್ಕು ಕೊಡ್ತಾ ಇದಾರೆ ಅಂತ ಅನುಮಾನ. ಕೆಪಿಎಸ್ಸಿ ನಲ್ಲೂ 5 ಕೋಟಿ 10 ಕೋಟಿ ಅಂತ ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಬರೀ ಪುಂಗಿ ಊದಬೇಡಿ. ರಾಜ್ಯದಲ್ಲಿ ಇಬ್ಬರು ಪುಂಗಿ ಊದುವರು ಇದ್ದಾರೆ ಅವರು ಯಾರು ಅಂದರೆ ಸಿಟಿ ರವಿ ಹಾಗೂ ಯತ್ನಾಳ್ ಎಂದು ಟೀಕಿಸಿದ್ದಾರೆ.
![](https://rajnewskannada.in/wp-content/uploads/2022/05/401d5pfq_400x400.jpg)
ರಾಜ್ಯದಲ್ಲಿ ಪೊಲೀಸ್ ಇಲಾಖೆ ಜೀವಂತವಾಗಿದ್ರೆ ಯತ್ನಾಳ್ ವಿರುದ್ಧ ಕೇಸ್ ದಾಖಲಿಸಲಿ. ಕೆಪಿಎಸ್ಸಿನಲ್ಲಿ ಹಣ ಕೊಟ್ಟು ಸದಸ್ಯರಾಗಿದ್ರೆ ಅವರ ಮೇಲೂ ಕೇಸ್ ದಾಖಲು ಮಾಡಬೇಕು. ಹಿಟ್ ಅಂಡ್ ರನ್ ಶೋಭೆ ಅಲ್ಲ. ಪಿಎಸ್ ಐ ನೇಮಕಾತಿ ವಿಚಾರದಲ್ಲಿ ಅರೆಸ್ಟ್ ಆಗಿದವರು ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳು. ಬೋರ್ಡ್ ಮೇಲೆ ಕ್ರಮ ಅಗಿದಿಯಾ ಇಲ್ಲ. ಎಕ್ಸಾಮಿನೇಷನ್ ಸೆಂಟರ್ ಗಳನ್ನು ಸಜೆಸ್ಡ್ ಮಾಡಿದವರ ಮೇಲೆ ಕ್ರಮ ಆಗಿದಿಯಾ ? ಅಶ್ವಥ್ ನಾರಾಯಣ ಸಹೋದರ ಸತೀಶ್ ಕೂಡ ಇನ್ ವಾಲ್ ಆಗಿದ್ದಾರೆ ಅನ್ನೋ ಆರೋಪ ಇದೆ. ಇದನ್ನೂ ಓದಿ :- ಪಿಎಸ್ಐ ಪರೀಕ್ಷಾ ಅಕ್ರಮ – ಪ್ರಭಾವಿ ಸಚಿವರ ಕೈವಾಡ ಎಂದ ಡಿಕೆಶಿ
ಏನ್ರೀ ಮಿಸ್ಟರ್ ಅಶ್ವಥ್ ನಾರಾಯಣ ಮೌನಿ ಬಾಬ ಆಗಿದ್ದೀರಾ ? ಪ್ರೋ. ನಾಗರಾಜ್ ಹಾಗೂ ಸೌಮ್ಯ ಅರೆಸ್ಟ್ ಆಗಿದ್ರು ಅಲ್ಲೂ ಕೂಡ ಮೌನಿ ಬಾಬಾ ಆಗಿದ್ರಿ. ಅಶ್ವಥ್ ನಾರಾಯಣ ಹಾಗೂ ಬ್ರದರ್ ಇನ್ ವಾಲ್ ಆಗಿದ್ದೀರಾ. ನಿಮಗೆ ಗಂಡಸ್ತನ ಇದ್ರೆ ತಾಕತ್ತು ಇದ್ರೆ ಇಡೀ ಪ್ರಕರಣವನ್ನು ಹೈಕೋರ್ಟ್ ನ ಸಿಟಿಂಗ್ ನ್ಯಾಯಾಧೀಶರ ಮೂಲಕ ತನಿಖೆ ಆಗಬೇಕು. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ತಿಳಿಸಿದರು.
![](https://rajnewskannada.in/wp-content/uploads/2022/05/siddaramaiah-dh-file-1099452-1649645184-1024x576.png)
ಕೆಂಪಣ್ಣ ಆಯೋಗ ವರದಿ ಹೊರಗೆ ಬಂದ್ರೆ ಸಿದ್ರಾಮಯ್ಯ ಬಣ್ಣ ಬಯಲಾಗುತ್ತೆ ಅಂತ ಸಿಟಿ ರವಿ ಹೇಳಿದ್ರು. ಸಿದ್ರಾಮಯ್ಯ ಅವಧಿಯಲ್ಲಿ ಯಾವುದೇ ಡಿನೋಟಿಫೀಕಶನ್ ಆಗಿಲ್ಲ. ನಿಮಗೆ ತಾಕತ್ತು ಇದ್ರೆ ಧಮ್ ಇದ್ರೆ ನೀವು ಕೇಸ್ ಪೈಲ್ ಮಾಡಿ. ಇಲ್ಲ ಅಂದರೆ ಕ್ಷಮೆ ಕೇಳಿ ಎಂದು ಹೇಳಿದ್ರು.
ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಬಂಧನ