ಪಿಎಸ್ಐ ಪರೀಕ್ಷಾ ಅಕ್ರಮ – ಪ್ರಭಾವಿ ಸಚಿವರ ಕೈವಾಡ ಎಂದ ಡಿಕೆಶಿ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ರಾಜ್ಯದ ಪ್ರಭಾವಿ ಸಚಿವರೊಬ್ಬರ ಕುಟುಂಬಸ್ಥರ ಕೈವಾಡದ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆ ಸಚಿವರು ಗಂಡಸು ಯಾರಿದ್ದಾರೆ ಎಂದು ಕೇಳಿದ್ದರು.

ಅವರೊಬ್ಬರೆ ಗಂಡಸರು. ನಾವು ರಾಮನಗರದಲ್ಲಿ ಗಂಡಸರಿಲ್ಲ, ನಾವೆಲ್ಲಾ ಹೆಂಗಸರು. ನಾನು ನನ್ನ ತಮ್ಮ ಹಾಗೂ ಅನಿತಾ ಕುಮಾರಸ್ಚಾಮಿ ಎಲ್ಲರೂ ಅವರ ಗಂಡಸ್ತನ ನೋಡಿ ನಡುಗುತ್ತಿದ್ದೇವೆ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿಗಳ ಮುಂದೆಯೇ ಅವರು ಗಂಡಸು ಯಾರು? ಅಂತ ಕೇಳಿದ್ದರು. ಇದೀಗ, ನಾನು ಅವರ ತಮ್ಮ ಭಾಗಿಯಾಗಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಆದರೆ, ಅವರ ಕುಟುಂಬಸ್ಥರು, ಸಂಬಂಧಿಕರು ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಬಂದಿದೆ.

ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನನಗೆ ಫೋನ್ ಕಾಲ್ ಗಳು ಬರುತ್ತಿವೆ. ಇನ್ನೇನು ಅವರು ಸಿಎಂ ಆಗುತ್ತಿದ್ದರು, ಬೆಳಗ್ಗೆ ಮಂಡ್ಯದಿಂದ ಬಿಜೆಪಿ ಕಡೆಯವರಿಂದ ಒಂದು ಫೋನ್ ಕಾಲ್ ಬಂದಿತ್ತು. ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ನೀವೇಕೆ ಅವರ ಹೆಸರು ಹೇಳಲಿಕ್ಕೆ ಹೋಗ್ತೀರಾ? ಇನ್ನೇನು ಅವರು ಸಿಎಂ ಆಗಿಬಿಡುತ್ತಾರೆ. ಸಿಎಂ ಆಗುವಂತ ಸಂದರ್ಭದಲ್ಲಿ ಪರೀಕ್ಷೆ ಅಕ್ರಮದಲ್ಲಿ ಅವರ ಕುಟುಂಬದ ಹೆಸರು ಬರುತ್ತಿದೆ. ನೀವು ಅವರ ಹೆಸರು ಏಕೆ ಹೇಳಲಿಕ್ಕೆ ಹೋಗ್ತೀರಾ? ಸ್ವಲ್ಪ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದರು. ಇದನ್ನೂ ಓದಿ :- ಕಾಂಗ್ರೆಸ್ ಪಾರ್ಟಿ ಬಿಟ್ಟು ದೊಡ್ಡ ತಪ್ಪು ಮಾಡಿದೆ – ಎಂ.ಟಿ.ಬಿ ನಾಗರಾಜ್
ಸಿಎಂ ಬೊಮ್ಮಾಯಿ ಕೈವಾಡವಿಲ್ಲ
ಸಿಎಂ ಆಗ್ತಾರೆ ಅಂತಾ ಫೋನ್ ಮಾಡಿದ್ರು. ಆದರೆ ನನಗೆ ಗೊತ್ತಿಲ್ಲ, ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡ್ತಿದ್ದಾರಾ ಇಲ್ವಾ? ಅವರ ಪಕ್ಷದ ನಿರ್ಧಾರ. ಆದರೆ ಈ ಪ್ರಕರಣದ ಬಗ್ಗೆ ಸಿಎಂ ನಿಸ್ಪಕ್ಷಪಾತ ತನಿಖೆ ನಡೆಸಲು ಮುಂದಾಗಬೇಕು. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ ಎಂದು ನಾನು ಹೇಳಲ್ಲ. ಸಿಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಸಿಎಂ ಸಚಿವರ ರಕ್ಷಣೆ ಮಾಡಬಾರದು ಎಂದು ತಾಕೀತು ಮಾಡಿದರು.


ಯಾರೇ ಇರಲಿ, ಎಷ್ಟೇ ದೊಡ್ಡವರಾಗಿರಲಿ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಐಡಿ ಅಧಿಕಾರಿಗಳು ಆಯ್ಕೆ ಆದ ವಿದ್ಯಾರ್ಥಿಗಳ ಹಳ್ಳಿಗಳಿಗೆ ಹೋಗಿದ್ದಾರಾ? ಆಯ್ಕೆ ಆದವರು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕಬಹುದಿತ್ತು.ಆದರೆ ಯಾವ ಅಧಿಕಾರಿಗಳು ಹೋಗಿಲ್ಲ. ಸರ್ಕಾರ ಅಕ್ರಮವನ್ನು ಮುಚ್ವಿಹಾಕಲು ಹೊರಟಿದೆ ಅನಿಸುತ್ತಿದೆ ಎಂದು ಆರೋಪಿಸಿದರು.

ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ, ಅಕ್ರಮದಲ್ಲಿರುವರೊಬ್ಬರನ್ನು ಪೊಲೀಸರಿಂದ ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ. ಯಾರು ಕರೆ ಮಾಡಿದ್ದು? ಏಕೆ ಮಾಡ್ತಿದ್ದಾರೆ? ಅವರ ಪಾತ್ರ ಏನು ತನಿಖೆ ನಡೆಸಲಿ. ಭ್ರಷ್ಟಾಚಾರವನ್ನ ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ, ಅದು ಹೊರಗೆ ಬಂದೇ ಬರುತ್ತದೆ ಎಂದರು.ಇದೇ ಸಂದರ್ಭದಲ್ಲಿ ನಾವು ಜೋರಾಗಿ ಅಧಿಕಾರ ಚಲಾಯಿಸಿದರೆ ಡಿ.ಕೆ.ಶಿವಕುಮಾರ್ ಉಸಿರು ನಿಂತು ಹೋಗುತ್ತೆ ಅಂತ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ “ಇದರಿಂದ ನನಗೆ ಭಯವಾಗ್ತಿದೆ” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಬಂಧನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!