ಬೊಲೆರೋ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ದೊಡ್ಡಗಂಜೂರು ಗೇಟ್ ಬಳಿ ನಡೆದಿದೆ.
![](https://rajnewskannada.in/wp-content/uploads/2022/05/Capture2-2.png)
ದಯಾನಂದ (45) ರಾಜೇಶ್ವರಿ (40) ಸಾವನ್ನಪ್ಪಿದ ದಂಪತಿಗಳು. ಇವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಶಾಲಾ ಅವಧಿ ಮಗಿಸಿ ಮನೆಗೆ ತೆರಳು ವೇಳೆ ಈ ಅಪಘಾತ ಸಂಭವಿಸಿದೆ.
![](https://rajnewskannada.in/wp-content/uploads/2022/05/Capture1-14.png)
ಬೊಲೆರೋ ವಾಹನ ಚಾಲಕನ ಅಜಾಗೃತೆ ಅಪಘಾತಕ್ಕೆ ಕಾರಣ ಎಂದು ಅಲ್ಲಿನ ಸಾರ್ವಜನಿಕರು ಹೇಳಿದ್ದಾರೆ. ಸಾರ್ವಜನಿಕರೆ ಮೃತದೇಹಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :- ಸ್ಕ್ರಿಪ್ಟ್ ಬರೆಯೋರೇ ಬೇರೆ…ನಾಗೇಶ್ ಅವರದ್ದು ಕೇವಲ ನಟನೆ ಮಾತ್ರ – ಜಿ.ಪರಮೇಶ್ವರ್