ಸಿಡಿ ಪ್ರಕರಣದ ಯುವತಿ ಮಧ್ಯಾಹ್ನ 3 ಗಂಟೆಗೆ ಹಾಜರಾಗುವುದಾಗಿ ಯುವತಿ ಪರ ವಕೀಲ ಕೆ.ಎನ್. ಜಗದೀಶ್ ನ್ಯಾಯಾಕಲಯಕ್ಕೆ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾದ ವಕೀಲ ಜಗದೀಶ್, ಯುವತಿ ಬೆಂಗಳೂರಿನಲ್ಲಿಯೇ ಇದ್ದಾಳೆ. ನ್ಯಾಯಾಧೀಶರು ಸಮಯ ಮತ್ತು ದಿನಾಂಕ ಕೇಳಿದ್ದರು. ನಾವು ಇಂದು ಮಧ್ಯಾಹ್ನ ಯುವತಿ ಹಾಜರಾವುದಾಗಿ ತಿಳಿಸಿರುವುದಾಗಿ ಹೇಳಿದರು.
ಯುವತಿ ಹೇಳಿಕೆ ಪಡೆಯಲು ನ್ಯಾಯಾಲಯ ಅನುಮತಿ ನೀಡಿದ್ದು, ಯುವತಿ ಹೇಳಿಕೆ ಪಡೆದ ನಂತರ ಎಸ್ ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಸೂಚನೆ ನೀಡಿದ್ದಾರೆ.