ನನ್ನ ಸಿದ್ದರಾಮಯ್ಯನವರ ಸಂಬಂಧ ಹಳೆ ಸಂಬಂದವಾಗಿದೆ. 8 ವರ್ಷ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಕೆಲಸ,ಇತ್ತೀಚಿನ ಪರಿಷತ್ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ.
![](https://rajnewskannada.in/wp-content/uploads/2022/05/image-45-1024x576.png)
ರಾಜ್ಯಸಭೆ ವಿಚಾರದ ತೀರ್ಮಾನವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಬಿಡುವುದು ನಮ್ಮ ಸಂಪ್ರದಾಯ ಎಂದು ಕಾಂಗ್ರೆಸ್ ನಾಯಕ ಜಿ ಪರಮೇಶ್ವರ್ ಹೇಳಿದ್ದಾರೆ. ಸಿದ್ದರಾಮಯ್ಯ ಭೇಟಿ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು ದೇಶದ ಚಿತ್ರಣ ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡೋದು ಅಧ್ಯಕ್ಷರಿಗೆ ಬಿಟ್ಡಿದ್ದು ಎಂದು ಹೇಳಿದ್ರು.
![](https://rajnewskannada.in/wp-content/uploads/2022/05/image-70.png)
ಸಿಎಂ ಕನಸ್ಸು ಕಾಣೋ ದಲಿತರು ಹುಚ್ಚರು ಎಂಬ ಕೇಂದ್ರ ಸಚಿವ ನಾರಯಣಸ್ವಾಮಿ ಹೇಳಿಕೆ ವಿಚಾರ
ಬಿಜೆಪಿ ಯಲ್ಲಿ ದಲಿತರಿಗೆ ಸಿಎಂ ಅವಕಾಶ ಸಿಗೋಲ್ಲ ಎಂಬುದು ಅವರೇ ಹೇಳಿದ್ದಾರೆ. ಅವ್ರು ನನ್ನ ಹಾಗೂ ಖರ್ಗೆಯವರ ಬಗ್ಗೆ ಹೇಳಿದ್ದನ್ನು ಗಮನಿಸಿದ್ದೇನೆ. ಅದು ಅವರ ಅಭಿಪ್ರಾಯ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಕೊಡ್ತಾ ಇದೆ. ಪಕ್ಷದ ಕಾರ್ಯಕ್ರಮದಿಂದ ಪರಮೇಶ್ವರ್ ದೂರ ಉಳಿದಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು ನಾನು ಏನುಕ್ಕೆ ಸಿಟ್ಟು ಮಾಡಿಕೊಳ್ಳಲಿ. ವೈಯಕ್ತಿಕ ಕಾರಣದಿಂದ ಕೆಲ ಕಾರ್ಯಕ್ರಮಕ್ಕೆ ಹೋಗಿಲ್ಲ. ಸಕ್ರಿಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲಾ ಪ್ರವಾಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ತುಮಕೂರಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ರು. ಇದನ್ನೂ ಓದಿ : – ಬಿಜೆಪಿ ವಿರುದ್ದ ಕಿಡಿಕಾರಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ
![](https://rajnewskannada.in/wp-content/uploads/2022/05/WhatsApp-Image-2022-05-28-at-12.05.52-PM-1024x768.jpeg)
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಬೆನ್ನಲ್ಲೆ ಸಿದ್ದರಾಮಯ್ಯ ಆರ್ಯ ದ್ರಾವಿಡ ಎಂಬ ಹೇಳಿಕೆ ವಿಚಾರ
ನಾವು ಯಾವುದೇ ವಿಚಾರಗಳನ್ನು ಲಘುವಾಗಿ ಮಾತನಾಡೋದನ್ನು ಅವ್ರು ನಿಲ್ಲಿಸಬೇಕು. ನಮ್ಮ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಪ್ರಪಂಚಕ್ಕೆ ಗೊತ್ತು. ಇತಿಹಾಸ ಬದಲಾಯಿಸುವ ಅವಶ್ಯಕತೆ ಇಲ್ಲ. ಇತಿಹಾಸ ತಿರುಚಿಹಂತದ್ದೋ ನಡೆಯುತ್ತಿದೆ. ಹೆಡ್ಗೆ ವಾರ್ ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ್ದನ್ನು ಇತಿಹಾಸದಲ್ಲಿ ನಾವು ಯಾವತ್ತೂ ನೋಡಿಲ್ಲ, ಓದಿಲ್ಲ. ಹೆಗ್ಗಡೆವಾರ್ ಬಗ್ಗೆ ಹೇಳೊದಾದ್ರೆ ಯಾವ ಸಂದರ್ಭದಲ್ಲಿ ಹೇಳ್ತಿರಾ ಅನ್ನೋದು ಮುಖ್ಯ ಎಂದು ಹೇಳಿದ್ರು.ಮುಖ್ಯಮಂತ್ರಿ ಚಂದ್ರು ರಾಜೀನಾಮೆ ಅವರ ವೈಯಕ್ತಿಕ ನಿರ್ಧಾರ. ನಾವು ಅವರ ಬಳಿ ಮನವಿ ಮಾಡಬಹುದು ಬಿಟ್ಟು ಬೇರೆನು ಮಾಡೋಕೆ ಸಾಧ್ಯ ಎಂದು ತಿಳಿಸಿದ್ರು. ಇದನ್ನೂ ಓದಿ : – ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಚಂದ್ರು
![](https://rajnewskannada.in/wp-content/uploads/2022/05/WhatsApp-Image-2022-05-29-at-10.13.46-AM.jpeg)
ಕ್ಷೇತ್ರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು
ನಾನು ಕಳೆದು 15 ವರ್ಷಗಳಿಂದ ಕೊರಟಗೆರೆಯಲ್ಲಿದ್ದೇನೆ. 25 ವರ್ಷ ಮಧುಗಿರಿಯಲ್ಲಿದ್ದೆ . ಮೀಸಲು ಕ್ಷೇತ್ರ ಆದ ಮೇಲೆ ಕೊರಟಗೆರೆಗೆ ಬಂದೆ. 3 ಬಾರಿ ಅಲ್ಲಿಂದ ಆಯ್ಕೆ ಆಗಿದ್ದೇನೆ. ಈಗ ಕ್ಷೇತ್ರದಲ್ಲಿ ನಾನು ಇದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ನನ್ನ ಆಯ್ಕೆ ಮಾಡಿದ ಜನರಿಗೆ ಸೇವೆ ಮಾಡುತ್ತಿದ್ದೇನೆ. ಪ್ರತಿ ದಿನ ಬೆಳಿಗ್ಗೆ ಕ್ಷೇತ್ರಕ್ಕೆ ಹೋಗ್ತಾ ಇದ್ದೇನೆ. ಇದರ ಅರ್ಥವೇನು, ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಾರೆ ಎಂದು ಕ್ಷೇತ್ರದ ಬದಲಾವಣೆ ಗೊಂದಲಕ್ಕೆ ಡಾ.ಜಿ ಪರಮೇಶ್ವರ್ ತೆರೆ ಎಳೆದಿದ್ದಾರೆ.
ಇದನ್ನೂ ಓದಿ : – ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕ ಸಾವು – ಪೋಷಕರಿಗೆ ಸಾಂತ್ವನ ಹೇಳಿದ ಎಂ.ಪಿ ರೇಣುಕಾಚಾರ್ಯ