ಮದುವೆ ಸೇರಿದಂತೆ ಇನ್ನಿತರ ಆಚರಣೆಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು : ತೀವ್ರಗತಿಯಲ್ಲಿ ಹರಡುತ್ತಿರುವ ಕೊವಿಡ್ 19 ತಡೆಗಟ್ಟುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ನೂತನ ಮಾರ್ಗಸೂಚಿ ಜಾರಿಗೊಳಿಸಿದ್ದಾರೆ.

ಈ ಕುರಿತು ಮಾರ್ಗಸೂಚಿ ಹೊರಡಿಸಿರುವ ಅವರು, ಮುಂದಿನ ಆದೇಶದ ವರೆಗೆ ಎಲ್ಲ ಧಾರ್ಮಿಕ ಸಮಾರಂಭಗಳನ್ನು ನಿಷೇಧಗೊಳಿಸಿದ್ದು, ಮದುವೆಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನ ಮತ್ತು ಕಲ್ಯಾಣ ಮಂಟಪ, ಸಭಾಂಗಣ ಸೇರಿದಂತೆ ಇತರೆಡೆ 100 ಜನ ಮೀರಬಾರದು.

ಜನ್ಮದಿನ ಆಚರಣೆ, ನಿಧನ-ಶವಸಂಸ್ಕಾರ ಸೇರಿದಂತೆ ಇತರ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 50 ಜನ ಮತ್ತು ಸಭಾಂಗಣದಲ್ಲಿ 25 ಜನ ಮೀರದಂತೆ ನಿಯಮ ಪಾಲನೆ ಕಡ್ಡಾಯ. ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನ ಮೀರಬಾರದು. ಈ ಮಾರ್ಗಸೂಚಿಯೂ ಏ. 30 ವರೆಗೆ ಅನ್ವಯವಾಗಲಿದೆ.

ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಸಭಾಂಗಣವನ್ನು ಸಂಬಂಧಪಟ್ಟವರು ಸ್ಯಾನಿಟೈಸೆಷನ್ ಮಾಡುವುದು ಕಡ್ಡಾಯವಾಗಿದ್ದು, ಒಂದು ವೇಳೆ ಈ ಮೇಲಿನ ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!