ಅಂಜೂರ. ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ, ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪರಿಣಾಮಕಾರಿ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ.
![](https://rajnewskannada.in/wp-content/uploads/2022/06/image-225-1024x768.png)
ಈ ಹಣ್ಣನ್ನು ಒಣಗಿಸಿ ತಿನ್ನಲಾಗುತ್ತದೆ. ಅಂಜೂರ ಹಣ್ಣಿನಿಂದ ಆಗುವ ಪ್ರಯೋಜನಗಳೇನು ಅಂತ ನೋಡೋದಾದ್ರೆ ಒಣಗಿಸಿದ ಅಂಜೂರದಲ್ಲಿ ಪ್ರೋಟೀನ್, ನಾರಿನಾಂಶ ಮತ್ತು ಸಣ್ಣ ಪ್ರಮಾಣದ ಕೊಬ್ಬು ಹಾಗೂ ಕ್ಯಾಲ್ಸಿಯಂ, ಪೊಟಾಶಿಯಂ,ಕಬ್ಬಿಣಾಂಶ ಮತ್ತು ತಾಮ್ರ ಇದ್ದು ಇದು ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಲು ಸಹಕಾರಿಯಾಗಿದೆ. ಇದರಲ್ಲಿ ನಾರಿನಾಂಶ, ಪ್ರೋಟೀನ್ ಇರುವ ಕಾರಣದಿಂದಾಗಿ ಹೆಚ್ಚು ಅನಗತ್ಯ ಆಹಾರಗಳನ್ನು ತಿನ್ನದಂತೆ ತಡೆಯುತ್ತದೆ.
![](https://rajnewskannada.in/wp-content/uploads/2022/06/image-226.png)
ಒಣ ಅಂಜೂರವನ್ನು ರಾತ್ರಿ ನೆನೆಸಿ ಬೆಳಗ್ಗೆ ಅದರ ನೀರಿನ ಜೊತೆ ತಿನ್ನುವುದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರೆ, ಇದರ ಸೇವನೆ ಉಪಯೋಗಕಾರಿಯಾಗಿದೆ. ಒಣ ಅಂಜೂರವನ್ನು ಹಾಲಿನಲ್ಲಿ ನೆನೆಸಿ ಕುಡಿಯಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಅಧಿಕವಾಗಿದ್ದರೆ, ರಕ್ತ ಸಂಬಂಧಿ ಕಾಯಿಲೆ, ಯಕೃತ್ ಸಮಸ್ಯೆ ಇದ್ದರೆ ಅಂಜೂರ ತಿನ್ನುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಅಂಜೂರ ಹಣ್ಣಿನ ಸೇವನಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗಿ ಚೈತನ್ಯ ಉಂಟಾಗುತ್ತದೆ. ಈ ಹಣ್ಣಿನಲ್ಲಿ ನಾರಿನಂಶವಿರುವುದದರಿಂದ ಮಲಬದ್ದತೆಯಿರುವವರು ಸೇವಿಸುವುದು ಒಳ್ಳೆಯದು. ಇದನ್ನೂ ಓದಿ : – ಬ್ರಾಹ್ಮಿ ಎಲೆಯಿಂದ ಪ್ರಯೋಜನಗಳೇನು ಗೊತ್ತಾ… ?
![](https://rajnewskannada.in/wp-content/uploads/2022/06/image-227-1024x576.png)
ಮೂಲವ್ಯಾದಿಯಿಂದ ಬಳಲುವವರು ಮೂರು ಅಂಜೂರ ಹಣ್ಣುಗಳನ್ನು ರಾತ್ರಿ ಹೂತ್ತು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ನೀರು ಕುಡಿಯಬೇಕು. ಕೆಮ್ಮು ದಮ್ಮು ಇರುವವರು ಇದನ್ನು ಸೇವಿಸುವುದರಿಂದ ಕಫ ಹೂರಗೆ ಬರಲು ಸಹಾಯವಾಗಲಿದೆ.ಕುರುವಿನ ಮೇಲೆ ಅಂಜೂರದ ತಿರುಳನ್ನು ಪಟ್ಟು ಕಟ್ಟುವು ದರಿಂದ ಕೀವು ಹೊರ ಬಂದು ನೋವು ಕಡಿಮೆಯಾಗುತ್ತದೆ. ಸ್ನಾಯುಗಳ ನಿಶ್ಯಕ್ತಿಯನ್ನೂ ಹೋಗಲಾಡಿಸುವ ಸಾಮರ್ಥ್ಯ ಈ ಹಣ್ಣಿಗಿದೆ. ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಈ ಹಣ್ಣನ್ನ ಸೇವಿಸುವುದು ಒಳ್ಳೆಯದು.
ಇದನ್ನೂ ಓದಿ : – ದಿನನಿತ್ಯ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ ?