ದತ್ತಜಯಂತಿ (Dattajayanthi) ವೇಳೆ ದತ್ತಪೀಠದ ರಸ್ತೆ (Dattapitadha road) ಯಲ್ಲಿ ಮೊಳೆ ಹಾಕಿದ್ದ ಇಬ್ಬರು ದುಷ್ಕರ್ಮಿಗಳನ್ನ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮಹಮದ್ ಶಹಬಾಸ್, ವಾಹೀದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಬ್ಬರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳಾಗಿದ್ದಾರೆ.
ಡಿಸೆಂಬರ್ 6-7-8 ರಂದು ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ದತ್ತಜಯಂತಿಯ ಮೊದಲ ದಿನ ಮಹಿಳೆಯರು ಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆ ಚೆಲ್ಲಿದ್ದರು . ಪೊಲೀಸ್ (Police) ವಾಹನ ಸೇರಿದಂತೆ ನಾಲ್ಕೈದು ಗಾಡಿಗಳು ಪಂಚರ್ ಆಗಿ ರಸ್ತೆ ಮಧ್ಯೆ ನಿಂತಿದ್ದವು . ಹಾರ್ಡ್ ವೇರ್ ಶಾಪ್ ನಲ್ಲಿ 4 ಕೆ.ಜಿ. ಮೊಳೆಗಳನ್ನ ಕಿಡಿಗೇಡಿಗಳು ಖರೀದಿಸಿದ್ದರು. ಮತ್ತಷ್ಟು ಆರೋಪಿಗಳಿಗಾಗಿ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ. ತಲೆಮರೆಸಿಕೊಂಡಿರೋ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.
ಇದನ್ನು ಓದಿ : – ರಘುರಾಮ್ ರಾಜನ್ ಕಾಂಗ್ರೆಸ್ ಪಕ್ಷದ ಮುಂದಿನ ಮನಮೋಹನ್ ಸಿಂಗ್ ?