ಇಂಗ್ಲೀಷ್ ಓದಲು ಕಷ್ಟವಾಗುತ್ತೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ..!

7ನೇ ತರಗತಿ ವಿದ್ಯಾರ್ಥಿ ( student ) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ . ತುಮಕೂರಿನ ( tumakuru ) ಊರ್ಡಿಗೆರೆಯಲ್ಲಿ ನಡೆದಿದೆ . ಊರ್ಡಿಗೆರೆ ಸರ್ಕಾರಿ ಶಾಲೆಯ ಬಾಲಕ ಅಜಯ್ ( ajay ) ಆತ್ಮಹತ್ಯೆಗೆ ಯತ್ನಿಸಿದ್ದಾನೆ .

ಇಂಗ್ಲೀಷ್ ( English ) ಓದಲು ಕಷ್ಟವಾಗುತ್ತೆ ಶಾಲೆಗೆ ಹೋಗಲ್ಲ ಎಂದು ಬಾಲಕ ಹಠ ಮಾಡುತ್ತಿದ್ದ ಶಾಲೆಗೆ ಹೋಗುವಂತೆ ಪೋಷಕರು (Parents ) ತಿಳಿಸಿದ್ದರು . ನಿನ್ನೆ ಬೆಳಗ್ಗೆ 7 ಗಂಟೆ ಸಮಯದಲ್ಲಿ ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಅಜಯ್ ಸೇವಿಸಿದ್ದಾನೆ . ಮನೆಯಲ್ಲಿ ಕುಸಿದ ಬಾಲಕನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ . ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ . ಬಾಲಕ ಅಜಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ. ಕೂಲಿ ಕೆಲಸ ಮಾಡುತ್ತಾ ಸೋಮಶೇಖರ್ ಜೀವನ ನಡೆಸುತ್ತಿದ್ದರು .

ಕೂಲಿ ಕೆಲಸ ನಿಮಿತ್ತವಾಗಿ ಊರ್ಡಿಗೆರೆ ಗ್ರಾಮಕ್ಕೆ ಅಜಯ್ ಕುಟುಂಬ ವಲಸೆ ಬಂದಿತ್ತು. ಒಂದೆರಡು ದಿನ ಬಾಲಕ ಶಾಲೆಗೆ ಹೋಗಿದ್ದ . ಬಳಿಕ ಶಾಲೆಗೆ ಹೋಗುವುದಿಲ್ಲ ಎಂದು ಅಜಯ್ ಹಠ ಮಾಡಿದ್ದಾನೆ . ಶಾಲೆಗೆ ಹೋಗುವಂತೆ ಪೋಷಕರು ಬಾಲಕನಿಗೆ ಒತ್ತಾಯಿಸಿದ್ದಾರೆ. ಬಾಲಕನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದ ಹಾಗೆ ಆಸ್ಪತ್ರೆಗೆ ತುಮಕೂರಿನ ಬಿಇಓ ಹನುಮ ನಾಯಕ್ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ . ಇದನ್ನೂ ಓದಿ : – ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ – ನಳೀನ್‌ ಕುಮಾರ್‌ ಕಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!