ನಿನ್ನೆಯಷ್ಟೆ ರಾಜ್ಯಸಭ ಚುನಾವಣೆಯಲ್ಲಿ (Rajyasabha election) ಶ್ರೀನಿವಾಸಗೌಡ (Srinivasgowda) ಅಡ್ಡ ಮತದಾನ ಮಾಡಿದ್ದರು. ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಶ್ರೀನಿವಾಸಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.
![](https://rajnewskannada.in/wp-content/uploads/2022/06/ಶ್ರಿ.png)
ನಾನು ಕಾಂಗ್ರೆಸ್ ಗೆ (Congress) ಮತ ನೀಡಿದ್ದೇನೆ. 7 ತಿಂಗಳ ಹಿಂದೆಯೆ ಪ್ರಜ್ವಲ್ ರೇವಣ್ಣ (Prajwal revanna) ಅವರು ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ. ಈಗ ನನ್ನ ವಿಷಯದಲ್ಲಿ ಮಾತನಾಡುವ ಹಕ್ಕು ಜೆಡಿಎಸ್ ನವರಿಗಿಲ್ಲ. ನಿನ್ನೆ ಜೆಡಿಎಸ್ (JDS) ಮುಖಂಡರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಉಚ್ಚಾಟನೆ ಮಾಡಿದ ಬಳಿಕ ನಾನು ಯಾವುದೆ ಪಕ್ಷಕ್ಕೆ ಬೇಕಾದ್ರು ಹೋಗಬಹುದು. ನಾನು ಧರಂ ಸಿಂಗ್ (Dhram singh) ಸಂಪುಟದಲ್ಲಿ ಮಂತ್ರಿಯಾಗಿದ್ದೇ ಎಂದು ತಿಳಿಸಿದ್ರು. ಜೆಡಿಎಸ್ ನವರ ನಡತೆ ನ್ಯಾಯಯುತವಾಗಿಲ್ಲ. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಎಲ್ಲದರಿಂದ ನಾನು ಹೊರ ಬಂದಿದ್ದೇನೆ. ನನ್ನ ಕೈಲಾದಮಟ್ಟಿಗೆ ನಾನು ಅಭಿವೃದ್ಧಿ ಮಾಡಿದ್ದೇನೆ. ಕೋಲಾರಕ್ಕೆ (Kolar) ರಿಂಗ್ ರಸ್ತೆ ಮಾಡುವ ಕನಸಿದೆ ಎಂದು ತಿಳಿಸಿದ್ರು. ನಾನೊಬ್ಬ ಹಿರಿಯ ಶಾಸಕನಾದ್ರು ನನ್ನನ್ನು ಸಚಿವನಾಗಿ ಮಾಡಿಲ್ಲ. ಅವರೇ ನನ್ನ ಉಚ್ಚಾಟನೆ ಮಾಡಿದ ಬಳಿಕ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ : – ಒಂದು ವಾರದ ವರೆಗೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ – ಕುಮಾರಸ್ವಾಮಿ
![](https://rajnewskannada.in/wp-content/uploads/2022/06/Capture-ಯಹ.png)
ಇದೇ ವೇಳೆ ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ (Kumaraswamy) ಶಾಸಕ ಕೂಡ ಆಗಿರಲಿಲ್ಲ. ಇಂತಹ ಹಿರಿಯ ಶಾಸಕನನ್ನ ಸರಿಯಾಗಿ ನಡೆಸಿಕೊಂಡಿಲ್ಲ. ನನ್ನ ಹಿನ್ನೆಲೆ ನೋಡಿ ನನ್ನನ್ನು ಗೌರವಿಸಬೇಕಿತ್ತು. ಮುಂದಿನ ದಿನಗಳಲ್ಲಿ ನನ್ನ ಕೈಲಾದ ಮಟ್ಟಿಗೆ ಅಭಿವೃದ್ಧಿ ಮಾಡುವೆ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ನಲ್ಲಿ ಟಿಕೇಟ್ ಕೇಳಿದ್ದೆ. ಟಿಕೆಟ್ ಮಿಸ್ ಆಯ್ತು ಅದಕ್ಕಾಗಿ ನಾನು ಜೆಡಿಎಸ್ ನಲ್ಲಿ ಸ್ಪರ್ಧೆ ಮಾಡಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಶಾಸಕರಿಗೂ 50 ಲಕ್ಷ ರೂಪಾಯಿ ಕೊಟ್ರು. ಎಲ್ಲಾ ಜೆಡಿಎಸ್ ಶಾಸಕರಿಗೂ ಹಣ ಸಿಕ್ಕಿದೆ, ಆದ್ರೆ ನಾನು ಪಡೆದಿಲ್ಲ. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಶಾಸಕ ಕೂಡ ಆಗಿರಲಿಲ್ಲ. ನಾನು ನಾಲ್ಕು ಬಾರಿ ಗೆದ್ದಿದ್ದೇನೆ, ಎರಡು ಬಾರಿ ಸೋತಿದ್ದೇನೆ. ಸೀನಿಯರ್ ಆಗಿ ನನಗೆ ಕೊಡಬೇಕಾದ ಮರ್ಯಾದೆ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಶ್ರೀನಿವಾಸಗೌಡ ಕಿಡಿಕಾರಿದ್ದಾರೆ. ಇದನ್ನೂ ಓದಿ : – ನಮ್ಮಲ್ಲಿ ಯಾವುದೇ ಬಣನೂ ಇಲ್ಲ ಬಾಣನೂ ಇಲ್ಲ – ಲಕ್ಷ್ಮಣ್ ಸವದಿ ಆಕ್ರೋಶ