ಆನೇಕಲ್ ಡಿಪೋದಲ್ಲಿ (Anekal depo) ಮಹಿಳೆಯೊಬ್ಬರು ಅಧಿಕಾರಿಗಳ ವಿರುದ್ದ ಆರೋಪ ಮಾಡಿದ್ದಾರೆ. DME ಚಿನ್ನ ಚುಂಚಯ್ಯ(Chinna chunchaya) ಹಾಗೂ ADO ಗುರುಶಾಂತ (Gurushanta) ಎಂಬುವರ ಮೇಲೆ ಕಿರುಕುಳದ ಆರೋಪ ಬಂದಿದೆ.
![](https://rajnewskannada.in/wp-content/uploads/2022/06/Capture-1-19.png)
ಭೈರೇಶ್ (Bairesh) ಎಂಬುವವರು ಮರಣ ಹೊಂದಿದ್ದ ಬಳಿಕ ಅನುಕಂಪ ಆಧಾರದ ಮೇಲೆ ಮಹಿಳೆಗೆ ಕೆಲಸ ಕೊಟ್ಟಿದ್ದರು . ಗಂಡ ಮರಣ ಹೊಂದಿದ್ದ ಬಳಿಕ ಪತ್ನಿ ಮಮತಾ (Mamatha) ಎಂಬುವವರಿಗೆ ಕೆಲಸ ಕೊಟ್ಟಿದ್ದಾರೆ. ಮಮತಾ ಕಳೆದ ಎರಡು ತಿಂಗಳಿನಿಂದ KSRTC ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳಿಂದ ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿದ್ದಾರೆ. ಆನೇಕಲ್ ಡಿಪೋದಲ್ಲಿ ಅಧಿಕಾರಿಗಳನ್ನ ಈ ಕೂಡಲೇ ಅಮಾನತು ಮಾಡುವಂತೆ ಮಮತಾ ಸಂಬಂಧಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ KSRTC ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ : – ನನ್ನ ಪಕ್ಷದಿಂದ ಉಚ್ಛಾಟಿಸಲಾಗಿದೆ. ನನ್ನ ಬಗ್ಗೆ ಮಾತನಾಡುವ ಹಕ್ಕು ಜೆಡಿಎಸ್ ನವರಿಗಿಲ್ಲ – ಶ್ರೀನಿವಾಸಗೌಡ