ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿತ್ಯಾನಂದ ಕೈಲಾಸಕ್ಕೆ ಭಾರತದ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಟ್ವಿಟರ್ ನಲ್ಲಿ ಈ ಘೋಷಣೆ ಮಾಡಿದ್ದು, ನಿಮಗೆಲ್ಲ ಬೇಸರದ ವಿಷಯ ಏನೆಂದರೆ ಭಾರತದಿಂದ ಕೈಲಾಸಕ್ಕೆ ಬರುವವರಿಗೆ ನಿಷೇಧಿಸಲಾಗಿದೆ. ಕೇವಲ ಭಾರತ ಮಾತ್ರವಲ್ಲ, ಬ್ರೆಜಿಲ್, ಯುರೋಪ್, ಮಲೇಷ್ಯಾದಿಂದ ಬರುವವರಿಗೂ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ.
ಜಗತ್ತಿನಾದ್ಯಂತ ಕೊರೊನಾ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಈಕ್ವೆಡಾರ್ ದ್ವೀಪದಲ್ಲಿ ಸ್ಥಾಪಿಸಿಕೊಂಡಿರುವ ತಮ್ಮದೇ ಕೈಲಾಸ ದೇಶಕ್ಕೆ ಬಾರದಂತೆ ಅವರು ಮನವಿ ಮಾಡಿದ್ದಾರೆ.
ಹಲವಾರು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ 2109ರಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ನಿತ್ಯಾನಂದ ಕೈಲಾಸ ದೇಶ ಸ್ಥಾಪಿಸಿಕೊಂಡಿದ್ದು, ಪ್ರತ್ಯೇಕ ವೀಸಾ, ಹಣ ಬಿಡುಗಡೆ ಮಾಡಿಕೊಂಡಿದ್ದಾರೆ.