ರಾಜ್ಯದಲ್ಲಿಯೇ ಎರಡನೇ ದೊಡ್ಡದಾದ ಮಹಾ ನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಕೊನೆಗೂ ವಾರಸುದಾರರು ಬರುವ ಕಾಲ ಸನ್ನಿಹಿತವಾಗಿದೆ. ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
![](https://rajnewskannada.in/wp-content/uploads/2022/05/WhatsApp-Image-2022-05-11-at-9.18.17-AM2-708x1024.jpeg)
ಕಳೆದ ಮೂರು ವರ್ಷ ಒಂಭತ್ತು ತಿಂಗಳಿನಿಂದ ಅನಾಥವಾಗಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಅಧಿಸೂಚನೆ ಪ್ರಕಟವಾಗಿದ್ದು, ಬೆಳಗಾವಿ ಪ್ರಾದೇಶಿಕ ಆಯುಕ್ತರು ಇದೇ ತಿಂಗಳ 28ಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.ಈ ಹಿಂದೆ ಪ್ರಕಟಿಸಿದಂತೆ ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪ ಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಚುನಾವಣೆ ಬಳಿಕ ಬರೊಬ್ಬರಿ ಒಂಭತ್ತು ತಿಂಗಳು ಪಾಲಿಕೆಗೆ ಜನಪ್ರತಿನಿಧಿಗಳೇ ಇರ್ಲಿಲ್ಲ. ಸರಿ ಸುಮಾರು ನಾಲ್ಕು ವರ್ಷಗಳ ಕಾಲ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಜನಪ್ರತಿನಿಧಿಗಳಿಲ್ಲದೇ ಮಂಕು ಕವಿದಂತಾಗಿತ್ತು. ಅಧಿಕಾರಿಗಳ ದರ್ಪದಿಂದ ಪಾಲಿಕೆ, ಜನರಿಂದ ಬಹಳ ದೂರ ಹೋಗಿತ್ತು. ತಮ್ಮ ಸಮಸ್ಯೆಗಳನ್ನ ಯಾರಿಗೆ ಹೇಳಿಕೊಳ್ಳಬೇಕು ಅಂತ ಜನ ಗೊಂದಲದಲ್ಲಿದ್ರು. ಇದನ್ನೂ ಓದಿ : – ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೂ ಶಿಕ್ಷಣ ಇಲಾಖೆಯಲ್ಲಿ ನಡೆಯೋದಕ್ಕು ವ್ಯತ್ಯಾಸ ಇದೆ – ಬಸವರಾಜ್ ರಾಯರೆಡ್ಡಿ