ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆ ನಡೆದರೆ ಅದು ಅನ್ಯಾಯ – ಸಿದ್ದರಾಮಯ್ಯ

ಎಂ.ಬಿ ಪಾಟೀಲ್ ಅಶ್ವಥ್ ನಾರಾಯಣ್ ಭೇಟಿ ವಿಚಾರವಾಗಿ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ಎಂಬಿ ಪಾಟೀಲ್ ಹೇಳಿಕೆಯೇ ಮುಖ್ಯ. ಎಂ.ಬಿ ಪಾಟೀಲ್ ಅವರೇ ಸ್ಪಷಪಡಿಸಿದ್ದಾರೆ. ಅವರು ಹೇಳಿದ ಮೇಲೆ ನೋ ಕಮೆಂಟ್ಸ್ ಎಂದು ತಿಳಿಸಿದ್ರು.


ಐಪಿಎಸ್ ಅಧಿಕಾರಿ ಡಾ. ರವೀಂದ್ರನಾಥ್ ರಾಜೀನಾಮೆ ವಿಚಾರ
ಇದೊಂದು ಅತ್ಯಂತ ದುರ್ಬಲ ಹಾಗೂ ಭ್ರಷ್ಟ ಸರ್ಕಾರ. ಸಿಎಂಗೂ ಆಡಳಿತ ನಡೆಸಲು ಮುಕ್ತ ಅವಕಾಶ ಇಲ್ಲ. ನಕಲಿ ಜಾತಿ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದರು. ಇದಕ್ಕಾಗಿ ವರ್ಗಾವಣೆ ಆರೋಪ ಕೇಳಿ ಬಂದಿದೆ. ಇದು ನಿಜವಾಗಿದ್ದರೆ ಇದು ಮಹಾ ಅಪರಾಧ ಎಂದು ಹೇಳಿದ್ರು. ಇದನ್ನೂ ಓದಿ : – ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ಚಿನ್ನದ ರಥ

ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ: 4ನೇ ಬಾರಿಗೆ ರಾಜೀನಾಮೆ ನೀಡಲು ಐಪಿಎಸ್ ಅಧಿಕಾರಿ ಡಾ .ಪಿ.ರವೀಂದ್ರನಾಥ್ ಮುಂದು!- Kannada Prabha

ರಾಜಕೀಯ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು
ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆಯೇ ನಡೆಸಬಾರದು. ಸರ್ಕಾರ ಬೇಜವಾಬ್ದಾರಿತನ ತೋರುತ್ತಿದೆ. ಈಗಾಗಲೇ ಈ ಬಗ್ಗೆ ಕ್ರಮ ವಹಿಸಬಹುದಿತ್ತು. ಬೇರೆ ರಾಜ್ಯಗಳ ತೀರ್ಪು ಬಂದಾಗಲೂ ಸರ್ಕಾರ ಏನು ಮಾಡಿಲ್ಲ. ಒಂದು ವೇಳೆ ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆ ನಡೆದರೆ ಅದು ಅನ್ಯಾಯ. ಇದಕ್ಕೆ ನಮ್ಮ ವಿರೋಧ ಇದೆ ಸಿದ್ದರಾಮಯ್ಯ ತಿಳಿಸಿದ್ರು.

ಇದನ್ನೂ ಓದಿ : – ದೇಶದ್ರೋಹ ಪ್ರಕರಣ ದಾಖಲಿಸಬೇಡಿ – ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಸೂಚನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!