ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (prahlad joshi ) ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್ ಆಗಿದೆ . ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (sathish jarakiholi ) ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಖಾಸಗಿ ಹೊಟೇಲ್ ನಲ್ಲಿ ಕೈ ನಾಯಕರ ಸಭೆ ನಡೆಯಲಿದೆ .
![](https://rajnewskannada.in/wp-content/uploads/2022/05/WhatsApp-Image-2022-05-23-at-12.00.08-PM.jpeg)
ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೈ ನಾಯಕರ ಮೊದಲ ಸಭೆ ಇದಾಗಿದೆ. ಶಾಸಕರಾದ ಗಣೇಶ್ ಹುಕ್ಕೇರಿ , ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಮಹಾಂತೇಶ್ ಕೌಜಲಗಿ ಸೇರಿ ಹಾಲಿ, ಮಾಜಿ ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ . ಶಿಕ್ಷಕರ ಮತಕ್ಷೇತ್ರದಿಂದ ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಪದವೀಧರ ಮತಕ್ಷೇತ್ರದಿಂದ ಸುನೀಲ್ ಸಂಕ ಸ್ಪರ್ಧಿಸಲಿದ್ದಾರೆ . ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಮತಬೇಟೆಗೆ ರೂಪುರೇಷೆ ರೂಪಿಸಲಿದ್ದಾರೆ. ಇದನ್ನೂ ಓದಿ : – ಮುಂದಿನ 2 ಗಂಟೆಗಳ ಕಾಲ ದೆಹಲಿಯಲ್ಲಿ ಸಾಧಾರಣ ಮಳೆಯೊಂದಿಗೆ ಗುಡುಗು ಸಹಿತ ಮಳೆ ಮುಂದುವರಿಯಲಿದೆ – ಭಾರತೀಯ ಹವಾಮಾನ ಇಲಾಖೆ ಟ್ವೀಟ್