ನಮ್ ಹುಡುಗಿ ಜೊತೆ ಮದುವೆ ಆಗಲಿ ಅಂತಾ ರಥಕ್ಕೆ ಬಾಳೆಹಣ್ಣು ಎಸೆದ ಭೂಪ

ನಮ್ ಹುಡುಗಿ ಜೊತೆ ಮದುವೆ ಆಗಲಿ ಅಂತಾ ರಥಕ್ಕೆ ಬಾಳೆಹಣ್ಣು ಎಸೆದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆಯಲ್ಲಿ ನಡೆದಿದೆ.

ದೇವಿಗೆ ಭಕ್ತನೋರ್ವನಿಂದ ಬಾಳೆಹಣ್ಣಲ್ಲಿ ನಮ್ಮುಡುಗಿ ಜೊತೆ ನನ್ನ ಮದುವೆಯಾಗಲಿ ಪಿ ಒ ಎಲ್ ಎಂದು ಬರೆದು ರಥಕ್ಕೆ ಎಸೆದಿದ್ದಾನೆ. ಈ ಬಾಳೆಹಣ್ಣು ಇನ್ನೊಬ್ಬ ಭಕ್ತನಿಗೆ ಸಿಕ್ಕಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ :- ಜಲಾಶಯವನ್ನ ಹತ್ತಲು ಹೋಗಿ ಎಡವಟ್ಟು ಮಾಡಿಕೊಂಡ ಯುವಕ

ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಬಂಧನ
ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನ ಬೆಂಗಳೂರಿನ ಗಿರಿನಗರದಲ್ಲಿ ಬಂಧಿಸಲಾಗಿದೆ. ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮನೋರಂಜಿತ್, ಸುಗೇಶ್ ಕುಮಾರ್ ನನ್ನು ಬಂಧಿಸಲಾಗಿದೆ.

ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿರುವ ವಿದ್ಯಾರ್ಥಿಗಳು ಐಷಾರಾಮಿ ಜೀವನಕ್ಕಾಗಿ ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ರು. ಈ ಸಂಬಂಧ ದಾಳಿ ನಡೆಸಿದ ಗಿರಿನಗರ ಪೊಲೀಸರಿಂದ 51 ಗ್ರಾಂ ಎಕ್ಸ್.ಟ.ಸಿ ಮಾತ್ರೆಗಳು ಹಾಗೂ ವಿವಿಧ ಬಗೆಯ ಡ್ರಗ್ಸ್ ಗಳು, ಮೊಬೈಲ್ ಫೋನ್, ಕಾರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ :- ಇಂದಿನಿಂದ ಕ್ವಾಡ್ ಶೃಂಗಸಭೆ- ಟೋಕಿಯೋದಲ್ಲಿ ಮೋದಿಗೆ ಆತ್ಮೀಯ ಸ್ವಾಗತ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!