ವರದಿ : ಧನು ಯಲಗಚ್
ಬೆಂಗಳೂರು : ಕೊರೋನಾ ಎರಡನೇ ಅಲೆ ಹಿನ್ನೆಲೆ ಸ್ಯಾಂಡಲ್ ವುಡ್ ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಇನ್ಮುಂದೆ ಸಿನಿಮಾ ಥಿಯೇಟರ್ ಗಳಲ್ಲು ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದ್ದು ಸರ್ಕಾರದ ಈ ನಿರ್ಧಾರಕ್ಕೆ ಕಂಪ್ಲೀಟ್ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸ್ತಿದೆ.
ಕೋಟಿ ಕೋಟಿ ಬಂಡವಾಳ ಹೂಡಿ ಸಿನಿಮಾ ನಿರ್ಮಿಸಿದ ನಿರ್ಮಾಪಕನ ಪಾಡು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಸರ್ಕಾರದ ಈ 50-50 ನೀತಿಯನ್ನ ನಿರ್ಮಾಪಕರು, ನಿರ್ದೇಶಕರು, ವಾಣಿಜ್ಯ ಮಂಡಳಿ ಒಪ್ಪಿಕೊಳ್ಳುತ್ತಿಲ್ಲ.
ಯುವರತ್ನ ಸಿನಿಮಾ ಇದೇ ಏಪ್ರಿಲ್ ಒಂದಕ್ಕೆ ರಿಲೀಸ್ ಆಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ಶೇ.50ರಷ್ಟು ಆಸನಕ್ಕೆ ಅವಕಾಶ ನೀಡುವ ಕುರಿತು ನಟ ಪವರ್ಸ್ಟಾರ್ ಪುನೀತ್ ಫೇಸ್ಬುಕ್ ಲೈವ್ ಬಂದು ಸರ್ಕಾರಕ್ಕೆ ಮನವಿ ಮಾಡಿದ್ರು. ಜೊತೆಗೆ ಅಭಿಮಾನಿಗಳ ಜೊತೆ ಮಾತುಕತೆ ಮಾಡಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ಪಡೆದ್ರು.
ಇನ್ನು ಇವತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳ ನೇತೃತ್ವದಲ್ಲಿ ಸಭೆಯನ್ನ ಮಾಡಲಾಯ್ತು. ಈ ಸಭೆಯಲ್ಲಿ ಸರ್ಕಾರಕ್ಕೆ ಚಿತ್ರರಂಗಕ್ಕೆ ಆಗ್ತಿರೋ ಅನ್ಯಾಯದ ಬಗ್ಗೆ ಹಾಗೂ ಪದೇ ಪದೇ ಯಾಕೆ ಸರ್ಕಾರ ಕೊರೊನಾ ವಿಷಯದಲ್ಲಿ ಚಿತ್ರರಂಗವನ್ನೇ ಟಾರ್ಗೆಟ್ ಮಾಡ್ತಿದೆ.
ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮೊದ್ಲು ಒಂದು ಮಾತನ್ನ ಕೇಳಿಲ್ಲ ಆದ್ರಿಂದ ನಾವು ಸರ್ಕಾರಕ್ಕೆ ಮನವಿಯನ್ನ ಮಾಡ್ತಿವಿ, ಥಿಯೇಟರ್ನಲ್ಲಿ ಎಷ್ಟು ಸೀಟ್ ವ್ಯವಸ್ಥೆಯಿದೆ ಅಷ್ಟಕ್ಕೆ ಅವಕಾಶ ನೀಡ್ಬೇಕು ಈ ಬಗ್ಗೆ ಮನವಿ ಮಾಡ್ತಿವಿ ಅಂತಾ ಹೇಳಿದ್ರು. ಆದರೆ ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎನ್ನುವುದನ್ನು ಕಾದಷ್ಟೇ ನೋಡಬೇಕು.