ಜಮಖಂಡಿಯಲ್ಲಿ ಪ್ರತಿಭಟನಾಕಾರರ ಕಲ್ಲೇಟಿಗೆ ಚಾಲಕ ಸಾವು

ಬಾಗಲಕೋಟೆ : ಸಾರಿಗೆ ನೌಕರರು‌ ನಡೆಸುತ್ತಿದ್ದ ಪ್ರತಿಭಟನೆ ಮಧ್ಯೆಯು ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಿಬ್ಬಂದಿ ವಾಹನ ಮೇಲೆ‌ ಕಲ್ಲು ಎಸೆದ ಘಟನೆ ನಡೆದಿದ್ದು, ಕಲ್ಲು ಎಸೆತದಿಂದ‌ ಚಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿ ನಡೆದಿದೆ.
.
ಬಾಗಲಕೋಟ ಅಪಜಲಪೂರ ದಿಂದ ಜಮಖಂಡಿ ಗೆ ಆಗಮಿಸುತ್ತಿದ್ದ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಗಾಜು ಒಡೆದು, ಚಾಲಕ ತಲೆ ಮೇಲೆ ಪೆಟ್ಟು ಬಿದ್ದಿದೆ. ಇದರಿಂದ ನಬಿಸಾಬ ಅವಟಿ ಬಸ್ ಚಾಲಕನಿಗೆ ಕಲ್ಲೆಟಿನಿಂದ ಪ್ರಜ್ಞೆ ತಪ್ಪಿದ ಚಾಲಕನನ್ನು ಜಮಖಂಡಿ ‌ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಕಾರಿ ಅಗದೇ ಚಾಲಕ ಮೃತಪಟ್ಟಿದ್ದಾನೆ.

ಬೇರೆ ಚಾಲಕನ ಮುಖಾಂತರ ಜಮಖಂಡಿ ಡಿಪೋಗೆ ಆಗಮಿಸಿದ ಬಸ್ ಕಳುಹಿಸಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗೊಂಡಿಲ್ಲ. ಕಳೆದ ದಿನಗಳಿಂದ‌ ಬಸ್ ಸಂಚಾರ ಸ್ಥಗಿತ ಗೊಂಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಚಾಲಕ ಸಂಘಟನೆ ಪ್ರತಿಭಟನೆ ಧಿಕ್ಕರಿಸಿ ವಾಹನ ಚಾಲನೆ ಮಾಡುತ್ತಾ ಬರುವಾಗ ದಾರಿಯಲ್ಲಿ ಬಸ್ ಮೇಲೆ ಕಲ್ಲು ಎಸೆಯಲಾಗಿದೆ.

ಘಟನೆ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದ್ದು. ಈ ಘಟನೆ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!