ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದು ವೀರಶೈವ ಲಿಂಗಾಯ್ತ .ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.ಆದ್ರೆ ಅದು ಇಲ್ಲಿಯವರೆಗೂ ಆಗಿಲ್ಲ.
![](https://rajnewskannada.in/wp-content/uploads/2022/05/image-11.jpeg)
ಶಿಕ್ಷಣ, ಉದ್ಯೋಗದಲ್ಲಿ ವಿರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎಂದು ಸಭೆಯಲ್ಲಿ ಈಶ್ವರ್ ಖಂಡ್ರೆ (ESHWAR KHANDRE )ಹೇಳಿದ್ದಾರೆ . ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ಇವತ್ತಿನಿ ವಾರ್ಷಿಕ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದೆ ಮೀಸಲಾತಿಗೆ ಕೇಂದ್ರ ಶಿಫಾರಸು ಮಾಡ್ಬೇಕು . ಓಬಿಸಿ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಓಬಿಸಿ ಪಟ್ಟಿಯಲ್ಲಿ ಆಗಸ್ಟ್ ಒಳಗೆ ಸೇರ್ಬೇಕು .
ಲಿಂಗಾಯತ ಮತ್ತು ವೀರಶೈವ ಎರಡು ಒಂದೇ .ಎರಡು ಒಂದೇ ನಾಣ್ಯದ ಎರಡು ಮುಖಗಳು . ಸಮಸಮಾಜದ ನಿರ್ಮಾಣ ಆಗ್ಬೇಕು ವಿಧಾನಸೌಧದಲ್ಲಿ ಬಸವಣ್ಣನವ್ರ ಪುತ್ಥಳಿ ಅದಷ್ಟು ಶೀಘ್ರದಲ್ಲಿ ಆಗ್ಬೇಕು ಎಂದು ಸಭೆಯ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಲ್ಲಾರಿಗೂ ಸಾಮಾಜಿಕ ನ್ಯಾಯ ಸಿಗ್ಬೇಕು. ಇನ್ನು ಮುಂದೆ ವೀರಶೈವ ಲಿಂಗಾಯತ ಮಹಾಸಭಾ ಎಂದು ನಾಮಕರಣ ಮಾಡುತ್ತಿದ್ದೇವೆ.ಇದನ್ನೂ ಓದಿ : – ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ- ವಿದ್ಯುತ್ ತಂತಿ ಹರಿದು ಬಿದ್ದು ಎರಡು ಹಸುಗಳು ಸಾವು
![Eshwar Khandre: ಕಲ್ಯಾಣ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ; ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ಕಿಡಿ - eshwar khandre slams bjp govt over kalyana karnataka | Vijaya Karnataka](https://static.langimg.com/thumb/msid-88405396,imgsize-5436,width-540,height-405,resizemode-75/vijay-karnataka.jpg)
ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಮಠಾಧೀಶರು ತೀರ್ಮಾನ ಮಾಡಿದ್ದಾರೆ.ಹೀಗಾಗಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ಎಂದು ತಿದ್ದುಪಡಿ ಮಾಡುತ್ತಿದ್ದೇವೆ.ಅಖಿಲ ಭಾರತೀಯ ವೀರಶೈವ ಮಹಾಸಭಾ ವಾರ್ಷಿಕ ಸಭೆಯನ್ನು ಮಾಡಿದ್ದೇವೆ .ಸಮಾಜದ ಏಕತೆ ಅಖಂಡತೆ ಒಗ್ಗೂಡಿಸುವುದು ಮಹಾಸಭಾ ಧ್ಯೆಯೋದ್ದೇಶ . ವಿಶೇಷವಾಗಿ ಜಗತ್ತಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದು ಲಿಂಗಾಯತ ವೀರಶೈವ ಮಹಾಸಭಾ .
ಆದರೆ ಇದುವರೆಗೆ ಅದು ಈಡೇರಿಲ್ಲ ೧೯೯೩-೯೪ ರ ಮಂಡಲ ಆಯೋಗದ ವರದಿ ಪ್ರಕಾರ ಕೇವಲ ೧೪ ಒಳ ಪಂಗಡಗಳಿಗೆ ಮಾತ್ರ ಮೀಸಲಾತಿ ನೀಡಲಾಗಿದೆ.ಇನ್ನೂ ಹಲವು ಒಳ ಪಂಗಡಗಳಿಗೆ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲ್ಪಿಟ್ಟಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ೫% ಅವಕಾಶ ಇದೆ.ಆದರೆ ಕೇಂದ್ರದಲ್ಲಿ ಈ ಮೀಸಲಾತಿ ಇಲ್ಲ. ಇದನ್ನೂ ಓದಿ :- ಟಿ20 ಕ್ರಿಕೆಟ್ ನ ಐಸಿಸಿ ರ್ಯಾಂಕಿಂಗ್ ನಲ್ಲಿ ಭಾರತಕ್ಕೆ ಅಗ್ರಸ್ಥಾನ
![eshwar khandre: ಐಟಿ ಬಿಟಿ ಖ್ಯಾತಿಯ ರಾಜ್ಯ ಈಗ ಭ್ರಷ್ಟಾಚಾರದ ರಾಜ್ಯ: ಈಶ್ವರ ಖಂಡ್ರೆ - eshwar khandre says karnataka is becoming corrupt state under bjp govt | Vijaya Karnataka](https://vijaykarnataka.com/photo/msid-90916077,imgsize-125228/pic.jpg)
ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಲಿಂಗಾಯತ ವೀರಶೈವ ಎಲ್ಲ ಪಂಗಡ ಒಳಗೊಂಡು ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು.ಕೇಂದ್ರ ಇದನ್ನು ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ .ಆಂಧ್ರ ಕೇರಳ ಮಹಾರಾಷ್ಟ್ರ ಒಕ್ಕೂಟದಿಂದಲೂ ಒತ್ತಡವಿದೆ. ಲಿಂಗಾಯತ ವೀರಶೈವ ವಿಚಾರದಲ್ಲಿ ರಾಜಕೀಯದ ಬಗ್ಗೆ ಮಾತನಾಡೋದಿಲ್ಲ .ಇದರ ಹಿಂದೆ ಬೇರೆ ಬೇರೆ ಸಂಗತಿಗಳಿವೆ.ರಾಜಕೀಯ ವಿಚಾರವನ್ನು ಪ್ರತ್ಯೇಕ ವೇದಿಕೆಯಲ್ಲಿ ಮಾತನಾಡ್ತೇವೆ.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಬಗ್ಗೆ ನಾನು ಮಾತನಾಡೋದಿಲ್ಲ.ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದಕ್ಕೆ ನಾವು ಸಿದ್ದರಾಗಿದ್ದೇವೆ.ಇಡೀ ಸಮಾಜಕ್ಕೆ ತಿಳಿಸುತ್ತೇವೆ.ಪಾಲನೆ ಯಾರು ಮಾಡುತ್ತಾರೋ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿಯಾದ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದನ್ನೂ ಓದಿ :- ಭೀಕರ ಕಾರು ಅಪಘಾತ – ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ನಿಧನ