ಬೆಂಗಳೂರಿಗೆ ನೆಹರು ಕೊಡುಗೆ ಅಪಾರ- ನಾಗ್ಪುರ ಶಿಕ್ಷಣ ವ್ಯವಸ್ಥೆ ವಿರುದ್ಧ ಡಿ ಕೆ ಶಿವಕುಮಾರ್ ವಾಗ್ದಾಳಿ

ಸೋನಿಯಾ ಗಾಂಧಿ ( SONIYA GANDHI ) ಬೇಕಾದ್ರೆ ಪ್ರಧಾನಿ ಆಗಬಹುದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK.SHIVKUMAR ) ಹೇಳಿದ್ದಾರೆ. ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಲು ನೆಹರು (NEHRU ) ಕೊಡುಗೆ ಅಪಾರವಾಗಿದೆ.

ಬೆಂಗಳೂರಿನಲ್ಲಿ (Bengaluru ) ಮಾತನಾಡಿದ ಅವರು ನೆಹರು ಎಲ್ಲಾ ವರ್ಗದ ಜನರಿಗೆ ಅಭಿವೃದ್ಧಿಗಾಗಿ ಕೊಡುಗೆಯನ್ನು ಕೊಟ್ಟಿದ್ದಾರೆ. ನೆಹರು ಅವರ ಪ್ರತಿಯೊಂದು ಕಾರ್ಯವನ್ನ ಕಣ್ಣಿನಲ್ಲಿ ನೋಡುತ್ತಿದ್ದೇವೆ. ಅಣೆಕಟ್ಟು, ಶಾಲೆಗಳು ಮುಂತಾದವುಗಳು ನೆಹರು ಕೊಟ್ಟ ಕೊಡುಗೆ. ಬೆಂಗಳೂರಿಗೆ ನೆಹರು ಅವರು ಕೊಡುಗೆ ಅಪಾರ. ಈಗ ಸಾರ್ವಜನಿಕರ ಆಸ್ತಿಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡಲು ಹೊರಟಿದೆ. ಅವರ ಆಸ್ತಿಗಳನ್ನು ದೇಶಕ್ಕಾಗಿ ಕೊಟ್ಟಿದ್ದಾರೆ. ಈ ದೇಶಕ್ಕೆ ಅವರು ಮಗಳನ್ನು ತಯಾರು ಮಾಡಿದ್ರು.ಈ ದೇಶಕ್ಕೆ ಒಬ್ಬ ನಾಯಕಿಯನ್ನು ಕೊಟ್ಟಿದ್ದಾರೆ. ಅವರಿಬ್ಬರ ಅಳ್ವಿಕೆ ಈ ದೇಶದ ಅಡಿಪಾಯ. 8 ವರ್ಷದ ಹಿಂದೆ ಮೋದಿ ಸರ್ಕಾರ ಬಂದಿದೆ. ಇದನ್ನೂ ಓದಿ : – ದಾವೋಸ್ ನಲ್ಲಿ ಕರ್ನಾಟಕ ದೊಡ್ಡ ಮಟ್ಟದಲ್ಲಿ ಆಕರ್ಷಣೆ ಮಾಡಿದೆ – ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲಿ ಹೊರ ದೇಶದಿಂದ ಬಂದು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ನಮ್ಮ ಕರ್ನಾಟಕದವರು (Karnataka) ಉನ್ನತ ಸ್ಥಾನದಲ್ಲಿ ಇದ್ದಾರೆ. ಈಗ ನಾಗ್ಪುರ ಎಜುಕೇಶನ್ (Education) ತರುತ್ತಿದ್ದಾರಂತೆ. ಇದಕ್ಕೆ ಬೇಕಾದ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಎಲ್ಲಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ . ಯಾವುದೇ ಸಂಘಟನೆ ಇರಲಿ ಎಲ್ಲರೂ ಕೂಡ ಇದರ ವಿರುದ್ಧ ಹೋರಾಟ ಮಾಡಬೇಕು.ನೆಹರು ವೈಯಕ್ತಿಕ ವಿಚಾರಕ್ಕಾಗಿ ಆಳ್ವಿಕೆ ಮಾಡಿಲ್ಲ. ಸೋನಿಯ ಗಾಂಧಿಯವರು ಬೇಕಾದ್ರೆ ಪ್ರಧಾನ ಮಂತ್ರಿ ಆಗಬಹುದಿತ್ತು. ಅಭಿವೃದ್ಧಿ ರಾಷ್ಟ್ರ ಆಗಬೇಕು ಎಂದು ಒಬ್ಬ ಎಕಾನಮಿಸ್ಟ್ ಅವರಿಗೆ ಅಧಿಕಾರ ಬಿಟ್ಟು ಕೊಟ್ರು. ಇಂತಹ ಕೆಲಸ ಬಿಜೆಪಿಯವರು (bjp) ಯಾರಾದ್ರೂ ಮಾಡಿದ್ದಾರಾ..? ಎಂದು ಡಿಕೆಶಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ . ಇದನ್ನೂ ಓದಿ : – Ray Liotta – ನಿದ್ದೆ ಮಾಡುತ್ತಲೇ ಚಿರನಿದ್ರೆಗೆ ಜಾರಿದ ಹಾಲಿವುಡ್ ನಟ ರೇ ಲಿಯೋಟ್ಟಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!