ಹೊರಟ್ಟಿ ವಿರುದ್ಧ ಗಡದಿನ್ನಿ ಕಣಕ್ಕೆ – ಗುರುವನ್ನ ಸೋಲಿಸಲು ಪಣ ತೊಟ್ಟ ಶಿಷ್ಯ.!

ವಿಧಾನ ಪರಿಷತ್ ಚುನಾವಣೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ರಣ ಕಣ ರಂಗೇರಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ (basavaraj horatti ) ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀ ಶೈಲ ನಿಂಗಪ್ಪ ಗಡದಿನ್ನಿ(ningappa gadadini ) ಅವರನ್ನ ಜೆಡಿಎಸ್ ಕಣಕ್ಕಿಳಿಸಿದೆ. ಹೊರಟ್ಟಿ ಅವರ ಒಂದು ಕಾಲದ ಶಿಷ್ಯ, ಇದೀಗ ಗುರುವಿಗೇ ತಿರುಮಂತ್ರ ಹಾಕಲು ಹೊರಟಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಸತತವಾಗಿ 7 ಬಾರಿ ಗೆದ್ದು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇತಿಹಾಸ ನಿರ್ಮಾಣ ಮಾಡಿರುವ ಬಸವರಾಜ ಹೊರಟ್ಟಿ ಅವರಿಗೆ ಈ ಬಾರಿ ಅವರ ಆತ್ಮೀಯ ಶಿಷ್ಯನೇ ಪ್ರತಿಸ್ಪರ್ಧಿ. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಶ್ರೀಶೈಲ್ ಗಡದಿನ್ನಿ ಹೊರಟ್ಟಿ ಅವರ ಗರಡಿಯಲ್ಲಿ ಪಳಗಿರುವ ಪಟ್ಟದ ಶಿಷ್ಯ.ಶಾಲೆಯ ಶಿಕ್ಷಕರಾಗಿದ್ದ ಶ್ರೀಶೈಲ ಗಡದಿನ್ನಿ ಈಗಾಗಲೇ ಸ್ವಯಂ ನಿವೃತ್ತಿಯನ್ನೂ ಪಡೆದು ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಈ ಹಿಂದೆ ಹೊರಟ್ಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಡದಿನ್ನಿ, ಇದೀಗ ಹೊರಟ್ಟಿ ಅವರ ಎದುರಾಳಿಯಾಗಿ ನಿಂತಿದ್ದಾರೆ. ಗಡದಿನ್ನಿ ಅವರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಪದಾಧಿಕಾರಿಗಳೂ ಸಹ ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ :- ಮೇಕೆದಾಟು ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಆರೋಪ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿದ್ದರಾಮಯ್ಯಗೆ ಸಮನ್ಸ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!