ಹಾಸನದಲ್ಲಿ (Hassan) ವಿಶ್ವ ಪರಿಸರ ದಿನ (World environment day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಉಸ್ತುವಾರಿ ಚಂದನ್ ಗೌಡರ ನೇತೃತ್ವದಲ್ಲಿ ಗಿಡನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು .
![](https://rajnewskannada.in/wp-content/uploads/2022/06/WhatsApp-Image-2022-06-05-at-1.48.59-PM-1024x768.jpeg)
ಈ ಕಾರ್ಯಕ್ರಮಕ್ಕೆ ರಾಜ್ಯದ ಮನೆಮಾತಾಗಿರುವ ಡ್ರಾಮಾ ಜೂನಿಯರ್ (Drama juniors) ಮಧುಸೂದನ್ (Madhu sudhan) , ನವನಿತ್, ಭೈರವಿ, ತನುಶ್ ರಾಜ್, ಮತ್ತಿತರು ಹಾಜರಾಗಿದರು. ಹಾಸನದ ರೈಲ್ವೆ ಸ್ಟೇಷನ್ ಮುಂಭಾಗ ಗಿಡ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ನಂತರ ಮಾತನಾಡಿ ಮಧುಸೂದನ್ ಮನೆಗೊಂದು ಗಿಡ ಊರಿಗೊಂದು ವನ ಪ್ರತಿಯೊಬ್ಬರು ಒಂದೊಂದು ಗಿಡ ನೆಡಿ ಎಂದರು. ಮತ್ತು ಕರುನಾಡ ರಕ್ಷಣಾ ವೇದಿಕೆ ಸಂಘಟನೆಯು ಹೀಗೆ ಜನಪರ ಹಾಗೂಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅತ್ಯುನ್ನತ ಸ್ಥಾನಕ್ಕೆ ಹೋಗಲಿ ಹೀಗೆ ಪ್ರಗತಿಪರ ಚಿಂತನೆ ಜೊತೆಗೆ ಸಾಮಾಜಿಕ ಹೋರಾಟಕ್ಕೆ ಜಯ ಸಿಗಲಿ ಎಂದು ತಿಳಿಸಿದರು.
![](https://rajnewskannada.in/wp-content/uploads/2022/06/WhatsApp-Image-2022-06-05-at-1.48.59-PM1-1024x768.jpeg)
ಹಾಗೂ ಹಾಸನ ಜಿಲ್ಲಾ ಸಮಸ್ತ ಜನತೆಗೆ ವಿಶ್ವ ಪರಿಸರ ದಿನದ ಶುಭಾಶಯಗಳು ತಿಳಿಸಲಾಯಿತು . ನಂತರ ಹಾಸನದ ಕಲಾಭವನದಲ್ಲಿ ಕಾರ್ಯಕ್ರಮಕ್ಕೆ ಹೋಗಲಾಯಿತು. ಹೀಗೆ ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರೂ ಇಂದು ನೂರಾರು ಗಿಡಗಳನ್ನು ನೆಟ್ಟು ನೀರು ಹಾಕಿ ವಿಶ್ವ ಪರಿಸರ ದಿನಕ್ಕೆ ಮೆರಗು ತಂದರು. ಈ ಕಾರ್ಯಕ್ರಮಕ್ಕೆ ಚಂದನ್ ಗೌಡ, ಕುಮಾರಸ್ವಾಮಿ.ಜಿಲ್ಲಾ ಕಾರ್ಯಾಧ್ಯಕ್ಷ ದರ್ಶನ್.ಉಪಾಧ್ಯಕ್ಷ ಶ್ರೀರಾಮ್. ಪ್ರವೀಣ್ ಗೌಡ, ಜ್ಯೋತಿ ಗಣೇಶ್ ಮಹಿಳಾ ಅಧ್ಯಕ್ಷ, ಕೆಂಚಪ್ಪ, ಶ್ರೀರಾಮ್, ಹೇಮಂತ್, ಚಿರಂಜೀವಿ, ಸುನಿಲ್, ಶಶಾಂಕ್, ಪ್ರದೀಪ್, ವಿಜಯ್. ಮುಂತಾದವರು ಭಾಗವಹಿಸಿದ್ದರು . ಇದನ್ನೂ ಓದಿ : – ಹೊಸಕೋಟೆಯಲ್ಲಿ ವಿಶ್ವ ಪರಿಸರ ದಿನಕ್ಕೆ ಎಂಟಿಬಿ ನಾಗರಾಜ್ ಚಾಲನೆ